ಮಂಗಳೂರು : ಫೆ. 29 ರ ಸೋಮವಾರದಂದು “ದೇಶದ್ರೋಹಿಗಳೇ ಭಾರತ ಬಿಟ್ಟು ತೊಲಗಿ” ಘೋಷವಾಕ್ಯದೊಂದಿಗೆ “ದೇಶಕ್ಕಾಗಿ ನಡಿಗೆ” ಜಾಥಾವು ಮಂಗಳೂರಿನ ಕೆನರಾ ಕಾಲೇಜು ಜಂಕ್ಷನ್ ನಿಂದ ಸಾಗಿ ಪುರಭವನವನ್ನು ತಲುಪಿತು.
ರಾಷ್ಟ್ರಜಾಗೃತಿ ಸಮಿತಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಬೃಹತ್ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದು ದೇಶದ್ರೋಹಿಗಳಿಗೆ ಭಾರತದ ಏಕತೆ ಮತ್ತು ಅಖಂಡತೆಗಳ ಗೌರವವಿಲ್ಲದಿದ್ದರೆ ದೇಶದ್ರೋಹಿಗಳೇ ಭಾರತ ಬಿಟ್ಟು ತೊಲಗಿ ಎಂಬ ಸಂದೇಶವನ್ನು ನೀಡಿದ್ದಾರೆ.
ಪುರಭವನದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ನೂಪುರ್ ಶರ್ಮ ಅವರು ದಿಕ್ಸೂಚಿ ಭಾಷಣ ಮಾಡಿದರು.
ಭಾರತದ ಮೇಲೆ ನಡೆದಿರುವ ಭಯೋತ್ಪಾದನಾ ದಾಳಿಯನ್ನು, ಭಯೋತ್ಪಾದಕರನ್ನೂ ಬೆಂಬಲಿಸಿ ಜೆ.ನ್.ಯು. ನ ವಿದ್ಯಾರ್ಥಿಗಳು ದೇಶ ವಿರೋಧಿ ಘೋಷಣೆಗಳನ್ನು ಕೂಗಿದಾಗ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿತ್ತು. ದೌರ್ಭಾಗ್ಯಕರ ಬೆಳವಣಿಗೆಯಲ್ಲಿ ನಮ್ಮ ದೇಶದ ಕೆಲವು ರಾಜಕೀಯ ನೇತಾರರೂ ಈ ದೇಶದ್ರೋಹಿಗಳ ಬೆಂಬಲಕ್ಕೆ ನಿಂತಾಗ ಈ ಆಕ್ರೋಶ ಹೋರಾಟದ ರೂಪವನ್ನು ಪಡೆದು ದೇಶಭಕ್ತರು ಬೀದಿಗೆ ಬಂದು ದೇಶದ್ರೋಹಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು. ಇದೀಗ ಮಂಗಳೂರಿನ ದೇಶಭಕ್ತರು ಬೀದಿಗೆ ಇಳಿದು ದೇಶದ್ರೋಹಿ ವಿಧ್ವಂಸಕ ಶಕ್ತಿಗಳನ್ನು ಮಟ್ಟ ಹಾಕಲು ಪಣ ತೊಟ್ಟು ದೇಶಕ್ಕಾಗಿ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ನಡಿಗೆಯಲ್ಲಿ ನಿವೃತ್ತ ಯೋಧರು, ಕಲಾವಿದರು, ಚಿತ್ರತಾರೆಯರು, ಉದ್ಯೋಗಿಗಳು, ಉದ್ಯಮಿಗಳು ಸೇರಿದಂತೆ ಎಲ್ಲಾ ದೇಶಭಕ್ತ ಸಂಘಟನೆಗಳು ಜೊತೆಗೂಡಿದ್ದಾರೆ. ಇಲ್ಲಿಯವರೆಗೆ ಯುವಕರಲ್ಲಿ ದೇಶಪ್ರೇಮದ ಕಿಚ್ಚನ್ನು ಉರಿಸಿ, ದೇಶ ಕಟ್ಟುವ ಕೆಲಸಕ್ಕೆ ಹಚ್ಚುತ್ತಿದ್ದ, ವಿಶ್ವಗುರು ಭಾರತದ ಕನಸಿನೊಂದಿಗೆ ದೇಶ ಕಾರ್ಯದಲ್ಲಿ ನಿರತವಾಗಿರುವ ಯುವಾಬ್ರಿಗೇಡ್ ಕಾರ್ಯಕರ್ತರು ಈ ಜಾಥಾದಲ್ಲಿ ಪಾಲ್ಗೊಂಡಿದ್ದರು.
ಈಗಾಗಲೇ ಜೆ.ಎನ್.ಯು. ನಲ್ಲಿ ನಡೆದ ದುರ್ಘಟನೆ ವಿವರಗಳನ್ನು, ದೇಶದ್ರೋಹಿಗಳ ವಿರುದ್ದ ಸಾಮಾಜಿಕ ತಾಣಗಳಲ್ಲಿ ದೊಡ್ಡ ಮಟ್ಟಿನಲ್ಲಿ ದ್ವನಿ ಎತ್ತಿದ್ದ ಯುವಾಬ್ರಿಗೇಡ್ ಮೊನ್ನೆ ತಾನೆ ಬೆಂಗಳೂರು ಹಾಗೂ ಧಾರವಾಡದಲ್ಲಿ ನಡೆದ ಜಾಥಾದಲ್ಲೂ ಪ್ರಮುಖ ಪಾತ್ರವನ್ನು ವಹಿಸಿದ್ದು ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದರು. ಮೈಸೂರು, ಗದಗ ಸೇರಿದಂತೆ ಕರ್ನಾಟಕದ ಅನೇಕ ಕಡೆಗಳಲ್ಲಿ ನಡೆಯಲಿರುವ ಜಾಥಾಗಳಿಗೂ ಯುವಾಬ್ರಿಗೇಡ್ ಪೂರ್ಣ ಸಹಕಾರವನ್ನು ನೀಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.