ಮಂಗಳೂರು : ಶಿಸ್ತು ಜೀವನದ ಮಹತ್ವದ ಅಂಗ. ‘ಸದಾಸಿದ್ದ’ ಎಂಬ ಧ್ಯೇಯ ವಾಕ್ಯದ ಸಂಪೂರ್ಣ ಪರಿಚಯ ವಾಸ್ತವಿಕ ಅನುಭವವನ್ನು ಪಡೆಯುವಲ್ಲಿ ಈ ಮೇಳವು ಮಕ್ಕಳಲ್ಲಿ ಅಭಿರುಚಿ ಮೂಡಿಸಲು ಸಹಕಾರಿಯಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು, ಭಾರತ್ ಸ್ಕೌಟ್ಸ್-ಗೈಡ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಂಗಳೂರು ಹಾಗೂ ಶಾರದಾ ವಿದ್ಯಾಲಯ, ಕೊಡಿಯಾಲಬೈಲು, ಮಂಗಳೂರು ಜಂಟಿ ಆಶ್ರಯದಲ್ಲಿ ರೋವರ್ಸ್-ರೇಜರ್ಸ್ ಸಮಾಗಮ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಶಿಬಿರವು ‘ಸ್ವಚ್ಛ ಮಂಗಳೂರು’ ಘೋಷವಾಕ್ಯದೊಂದಿಗೆ ಸುಮಾರು 500 ಶಿಬಿರಾರ್ಥಿಗಳು ಮತ್ತು 40 ಶಿಕ್ಷಕರು ನಗರದ ನವಭಾರತ್ ಸರ್ಕಲಿನಿಂದಾಗಿ ಬೆಸೆಂಟ್ ವರೆಗೆ ಆಕರ್ಷಕ ಪಥ ಸಂಚಲನ ಸಾರ್ವಜನಿಕರಲ್ಲಿ ಸ್ವಚ್ಚತೆಯ ಕಾಳಜಿಯನ್ನು ಮೂಡಿಸಿತು. ನಂತರ ಶಿಬಿರದ ಉದ್ಘಾಟನಾ ಸಮಾರಂಭವು ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು.
ಜಿಲ್ಲಾ ವಾರ್ತಾಧಿಕಾರಿಯವರಾದ ಶ್ರೀ ಬಿ.ಎ. ಖಾದರ್ ಶಾಹ ಅವರು ಉದ್ಘಾಟನೆ ಮಾಡಿದರು. ಅತಿಥಿಗಳಾಗಿ ಲಯನ್ ಕುಡ್ಪಿ ಅರವಿಂದ ಶೆಣೈ ತಮ್ಮ ಅನುಭವವನ್ನು ಅತಿಥಿ ಭಾಷಣದ ಮೂಲಕ ತಿಳಿಸಿದರು. ಅಧ್ಯಕ್ಷೀಯ ಮಾತುಗಳನ್ನಾಡಿದ ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಪ್ರೊ.ಎಂ.ಬಿ.ಪುರಾಣಿಕರು ಶುಭ ಹಾರೈಸಿದರು. ವೇದಿಕೆಯಲ್ಲಿ ಡಾ| ಲೀಲಾ ಉಪಾಧ್ಯಾಯ, ಶ್ರೀಮತಿ ಸುನೀತಾ ವಿ ಮಡಿ, ಡಾ| ಬಾಲಕೃಷ್ಣ ಭಾರಧ್ವಾಜ್, ಶಿಬಿರದ ನೇತೃತ್ವ ವಹಿಸಿದ ಭಾರತ್ ಸ್ಕೌಟ್ಸ್-ಗೈಡ್ಸ್ನ ಪದಾಧಿಕಾರಿಗಳು, ರ್ಯಾಲಿ ನಿರ್ದೇಶಕರಾದ ಶ್ರೀ ದಿನೇಶ್ ಕೆ. ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಎಲ್ಲಾ ಚಟುವಟಿಕೆಗಳ ಸಂಪೂರ್ಣ ನಿರ್ದೇಶಕರಾಗಿ ವಿದ್ಯಾಲಯದ ಉಪ-ಪ್ರಾಂಶುಪಾಲರಾದ ಶ್ರೀ ದಯಾನಂದ ಕಟೀಲ್ ಇವರು ಶಿಬಿರಾರ್ಥಿಗಳಿಗೆ ಕೆಲವು ಜಾಗೃತಿ ಮಾಹಿತಿಯನ್ನಿಟ್ಟರು. ಎರಡು ದಿನಗಳ ಶಿಬಿರದಲ್ಲಿ ಶಿಬಿರಾರ್ಥಿಗಳಿಗಾಗಿ ‘ಶೌರ್ಯಾಂಗಣ’ವನ್ನು ಮಾಡಲಾಗಿದ್ದು, ಸಾಹಸ ಕ್ರೀಡೆಗಳ ಮೂಲಕ ಮಕ್ಕಳ ಸಾಹಸಾಭಿರುಚಿಯನ್ನು ಇಮ್ಮಡಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.