ನವದೆಹಲಿ: ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಶ್ರಾದ್ಧ ಮಾಡದಂತೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ನೇತಾಜೀ ಕುಟುಂಬ ಸದಸ್ಯರಿಗೆ ತಿಳಿಸಿದ್ದರು ಎಂಬ ಮಾಹಿತಿ ಬಹಿರಂಗಗೊಂಡ ಮಾಹಿತಿಗಳಿಂದ ತಿಳಿದು ಬಂದಿದೆ.
ವಿಮಾನ ಅಪಘಾತ ಸಂಭವಿಸಿದ ತಕ್ಷಣ ನೇತಾಜೀ ಕುಟುಂಬಕ್ಕೆ ಟೆಲಿಗ್ರಾಂ ಸಂದೇಶ ಕಳುಹಿಸಿದ್ದ ಗಾಂಧೀಜಿ, ಅವರ ಶ್ರಾದ್ಧ ಮಾಡದಂತೆ ಹೇಳಿದ್ದರು ಎಂಬ ಅಂಶವನ್ನು ನೇತಾಜೀ ಸಹೋದರನ ಮಗನ ಮಗ ಅಮಿಯಾ ನಾಥ್ ಬೋಸ್ ದಾಖಲಿಸಿದ್ದಾರೆ ಎಂದು ದಾಖಲೆಯಿಂದ ತಿಳಿದು ಬಂದಿದೆ.
ನೇತಾಜೀ ಸತ್ತಿಲ್ಲ ಎಂಬ ದೃಢ ವಿಶ್ವಾಸದಿಂದ ಗಾಂಧೀಜಿ ಈ ರೀತಿ ಹೇಳಿದ್ದರು ಎನ್ನಲಾಗಿದೆ.
ಇನ್ನೊಂದು ದಾಖಲೆಯಲ್ಲಿ ನೇತಾಜೀ ಬಳಿಯಿದ್ದ ಟ್ರೆಸರ್ ಬಾಕ್ಸ್ ನಲ್ಲಿ 1 ಲಕ್ಷ ರೂಪಾಯಿ ಹಣವಿತ್ತು. ಅಲ್ಲದೇ ಹಲವು ಚಿನ್ನಾಭರಣಗಳಿದ್ದವು. ಇದೆಲ್ಲವನ್ನೂ ಅವರು ಇಂಡಿಯನ್ ನ್ಯಾಷನಲ್ ಆರ್ಮಿಗಾಗಿ ಭಾರತೀಯರಿಂದ ಸಂಗ್ರಹಿಸಿದ್ದರು ಎನ್ನಲಾಗಿದೆ. ಬೋಸ್ ನಿಧನದ ಬಳಿಕ ಅದನ್ನು ಭಾರತೀಯ ಸರ್ಕಾರಕ್ಕೆ ಹಸ್ತಾಂತರಿಸಲಾಗಿತ್ತು. ಈ ಬಾಕ್ಸ್ನ್ನು ಅ.9, 1978ರಲ್ಲಿ ತೆರೆಯಲಾಗಿತ್ತು.
ನೇತಾಜೀ ಮಗಳಿಗೆ ವಾರ್ಷಿಕ ಆರು ಸಾವಿರ ರೂಪಾಯಿಯನ್ನು 1965ರವರೆಗೆ ಭಾರತ ಸರ್ಕಾರ ನೀಡುತ್ತಾ ಬಂದಿತ್ತು. ಅವರಿಗೆ ವಿವಾಹವಾದ ಬಳಿಕ ಇದನ್ನು ನಿಲ್ಲಿಸಲಾಯಿತು. ಈ ಹಣವನ್ನು ಮೊದಲು ನೇತಾಜೀ ಪತ್ನಿಗೆ ನೀಡಲು ಸರ್ಕಾರ ಮುಂದಾಗಿತ್ತಾದರೂ ಅದನ್ನು ಸ್ವೀಕರಿಸಲು ಅವರು ಒಪ್ಪಿಕೊಂಡಿರಲಿಲ್ಲ ಎಂಬ ಅಂಶವೂ ದಾಖಲೆಯಿಂದ ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.