News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಲ್ಪಸಂಖ್ಯಾತರ ರಕ್ಷಣೆಗೆ ಕ್ರಮಕೈಗೊಳ್ಳಲು ಸಿದ್ಧ

rajnathಅಟ್ಟಾರಿ: ದೇಶದ ವಿವಿಧೆಡೆ ಚರ್ಚ್, ಕ್ರೈಸ್ಥ ಶಾಲೆಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿರುವ ಗೃಹಸಚಿವ ರಾಜನಾಥ್ ಸಿಂಗ್, ಅಲ್ಪಸಂಖ್ಯಾತರ ರಕ್ಷಣೆಗಾಗಿ ಎಲ್ಲಾ ರೀತಿಯ ಕ್ರಮವನ್ನು ಕೈಗೊಳ್ಳಲು ಸಿದ್ಧ ಎಂದಿದ್ದಾರೆ.

ಸೋಮವಾರ ಪಂಜಾಬ್‌ನ ಅಟ್ಟಾರಿಯದಲ್ಲಿ ಸುದ್ದಿ ಮಾಧ್ಯಮಗಳೊಂಡಿದೆ ಮಾತನಾಡಿದ ಅವರು ‘ಅಲ್ಪಸಂಖ್ಯಾರ ರಕ್ಷಣೆಗಾಗಿ ಯಾವ ಹಂತದ ಕ್ರಮಕೈಗೊಳ್ಳಲೂ ನಾವು ಸಿದ್ಧ. ಅಲ್ಪಸಂಖ್ಯಾತರಲ್ಲಿ ಮೂಡಿರುವ ಅಭದ್ರತಾ ಭಾವವನ್ನು ತೊಡೆದು ಹಾಕಲು ಮುಂದಾಗುತ್ತೇವೆ’ ಎಂದರು.

ಚರ್ಚ್, ದೇವಸ್ಥಾನ, ಮಸೀದಿ ಎಲ್ಲೇ ದಾಳಿ ನಡೆದರೂ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಮೊನ್ನೆಯಷ್ಟೇ ಮಧ್ಯಪ್ರದೇಶದ ಕ್ಯಾಥೋಲಿಕ್ ಶಾಲೆಯ ಮೇಲೆ ದಾಳಿ ನಡೆದಿತ್ತು. ಅದಕ್ಕೂ ಮುನ್ನ ಹರಿಯಾಣದಲ್ಲಿ ಮತ್ತು ನವಿ ಮುಂಬಯಿಯಲ್ಲಿ ಚರ್ಚ್  ಮೇಲೆ ದಾಳಿಯಾಗಿತ್ತು.

ಪಶ್ಚಿಮಬಂಗಾಳದಲ್ಲಿ ಕ್ರೈಸ್ಥ ಸನ್ಯಾಸಿನಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಈ ಎಲ್ಲಾ ಘಟನೆಗಳು ಕ್ರೈಸ್ಥ ಸಮುದಾಯದಲ್ಲಿ ಅಭದ್ರತಾ ಭಾವವನ್ನು ಮೂಡಿಸಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top