ರಾಯ್ಪುರ: 125 ಕೋಟಿ ಭಾರತೀಯರು ನಿರ್ದಿಷ್ಟ ಗುರಿಯನ್ನು ತಲುಪಲು ಕಟಿಬದ್ಧರಾದಾಗ ಮಾತ್ರ ಭಾರತ ಪ್ರಗತಿಯನ್ನು ಸಾಧಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಛತ್ತೀಸ್ಗಢದ ರಾಯ್ಪುರದಲ್ಲಿ ನಡೆಯುತ್ತಿರುವ 20ನೇ ರಾಷ್ಟ್ರೀಯ ಯುವಜನೋತ್ಸವವನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಅವರು ಮಂಗಳವಾರ ಮಾತನಾಡಿದರು.
‘ಏಕತೆ, ಭಾವೈಕ್ಯತೆ, ಪರಸ್ಪರರ ಸಂಪ್ರದಾಯ ಮತ್ತು ಸಿದ್ಧಾಂತಗಳ ಬಗ್ಗೆ ಗೌರವ ಇಲ್ಲದೇ ಹೋದರೆ ಭಾರತ ಅಭಿವೃದ್ಧಿ ಪಥದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತದೆ’ ಎಂದರು.
ಸ್ವಾಮಿ ವಿವೇಕಾನಂದರಿಗೆ ಗೌರವಗಳನ್ನು ಸಲ್ಲಿಸಿದ ಅವರು, ವಿವೇಕಾನಂದರು ಮತ್ತು ಭಗತ್ ಸಿಂಗ್ ಬಗ್ಗೆ ಮಾತನಾಡಿದರೆ ನಮ್ಮ ಭಾರತೀಯ ಯುವಕರು ಪ್ರೇರಿತರಾಗುತ್ತಾರೆ. ಹಿಂದೆ ಜನರು ದೇಶಕ್ಕಾಗಿ ಸಾಯಲು ಪ್ರೇರಿತರಾಗುತ್ತಿದ್ದರೆ, ಈಗ ದೇಶಕ್ಕಾಗಿ ಬದುಕಲು ಮತ್ತು ದೇಶಕ್ಕಾಗಿ ಏನಾದರು ಮಾಡಲು ಪ್ರೇರಿತರಾಗುತ್ತಿದ್ದಾರೆ ಎಂದರು.
ಅತೀ ಹೆಚ್ಚು ಯುವಜನತೆಯನ್ನು ಹೊಂದುವ ಆರ್ಶೀವಾದ ನಮಗೆ ದೊರೆತಿದೆ, ಭಾರತ ತಯಾರಕ ಹಬ್ ಆಗಿ ಬೆಳೆದರೆ ಅದಕ್ಕೆ ಮಾರ್ಕೆಟ್, ಕಚ್ಛಾವಸ್ತುಗಳು ಕಾರಣವಲ್ಲ, ಕೌಶಲ್ಯಭರಿತ ಯುವಜನತೆ ಕಾರಣ ಎಂದರು.
ಬಡವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವುದೇ ಅಭಿವೃದ್ಧಿ, ಕೌಶಲ್ಯ ಅಭಿವೃದ್ಧಿಯತ್ತ ನಾವು ಹೆಚ್ಚು ಗಮನ ಹರಿಸಲು ಇದುವೇ ಕಾರಣ, ಮಗ ಪದವಿ ಪಡೆದನೆಂದರೆ ಪೋಷಕರು ಹೆಮ್ಮೆ ಪಡುತ್ತಾರೆ, ಆದರೆ ಆತ ಐಟಿಐಗೆ ಹೋದಾಗಲೂ ಇದೇ ಹೆಮ್ಮೆ ಇರುತ್ತದೆಯೇ? ಈ ಮನಃಸ್ಥಿತಿಯನ್ನು ನಾವು ಬದಲಾಯಿಸಬೇಕಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.