ಮುಂಬಯಿ: ಭಾರತ ವಿಶ್ವದಲ್ಲಿ ಕೋಮುವಾದದ ಭಾವನೆಗಳನ್ನು ಮೂಡಿಸಿಲ್ಲ, ಬದಲಾಗಿ ಆಧ್ಯಾತ್ಮಿಕತೆಯ ವಿಚಾರಗಳನ್ನು ಕಲಿಸಿದೆ. ಭಾರತದ ಸಾಧು-ಸಂತರು, ಪರಿಣಿತರು ಯಾವಾಗಲೂ ’ರಾಷ್ಟ್ರ ಧರ್ಮ’ (ರಾಷ್ಟ್ರಕ್ಕಾಗಿ ದುಡಿಯುವವರು)ಕ್ಕೆ ಸಮರ್ಥಿಸಲ್ಪಟ್ಟವರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜೈನ ಸನ್ಯಾಸಿ ಹಾಗೂ ಲೇಖಕ ಆಚಾರ್ಯ ರತ್ನಸುಂದರ್ಸುರ್ಜಿ ಮಹಾರಾಜ್ ಅವರ ೩೦೦ನೇ ಪುಸ್ತಕ ಬಿಡುಗಡೆ ವೇಳೆ ಮಾತನಾಡಿದ ಅವರು, ಭಾರತದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಟವರು ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ನಂಬಿಕೆ ಇಟ್ಟವರು. ಆಧ್ಯಾತ್ಮಿಕತೆ ಇಂದಿನ ಮನುಕುಲದ ಹಲವಾರು ಸಮಸ್ಯೆಗಳಿಗೆ ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.
ಭಾರತೀಯ ವಿಚಾರಗಳನ್ನು ಅರ್ಥೈಸುವಲ್ಲಿ ಈ ಜಗತ್ತು ವಿಫಲಗೊಂಡಿದೆ. ಭಾರತವು ಪಂಥೀಯ ಪ್ರವೃತ್ತಿಗಳನ್ನು ಅನುಸರಿಸಿದ ದೇಶವಲ್ಲ. ಕೋಮುವಾದ ಸಮಸ್ಯೆಗಳನ್ನು ಉದ್ಭವಿಸುತ್ತಿದ್ದರೆ, ಆಧ್ಯಾತ್ಮಿಕತೆ ಸಮಸ್ಯೆಗಳಿಗೆ ವಿಶ್ಲೇಷಣೆ ನೀಡಿ ಬಗೆಹರಿಸುತ್ತದೆ ಎಂದು ತಿಳಿಸಿದ್ದಾರೆ.
ಸಾಹಿತ್ಯ ಸತ್ಕಾರ ಸಮಾರೋಹ ಕಾರ್ಯಕ್ರಮದ ಸಂದರ್ಭ ’ಮೈ ಇಂಡಿಯಾ, ನೊಬೆಲ್ ಇಂಡಿಯಾ’ ಪುಸ್ತಕ ಬಿಡುಗಡೆ ಮಾಡಿದ ಪ್ರಧಾನಿ ಮೋದಿ, ಆಚಾರ್ಯ ರತ್ನಸುಂದರ್ಸುರ್ಜಿ ಮಹಾರಾಜ್ ಓರ್ವ ಆಧ್ಯಾತ್ಮಿಕ ನಾಯಕ, ಸಮಾಜ ಸುಧಾರಕರಾಗಿದ್ದಾರೆ. ಅವರು ಹಲವಾರು ಪುಸ್ತಗಳ ಮೂಲಕ ತಮ್ಮ ಪರಿಕಲ್ಪನೆಗಳು, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.