ನವದೆಹಲಿ: ಬಾಲಪರಾಧಿ ಬಿಡುಗಡೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ನಿರ್ಭಯಾ ತಾಯಿ ಆಶಾದೇವಿ, ಕಾನೂನು ಬದಲಾವಣೆಗೆ ಇನ್ನೆಷ್ಟು ನಿರ್ಭಯಾರ ಬಲಿ ಬೇಕು? ಎಂದು ಪ್ರಶ್ನಿಸಿದ್ದಾರೆ.
ಈ ವ್ಯವಸ್ಥೆಯ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ ಎಂದಿರುವ ಅವರು, ನ್ಯಾಯಾಲಯ ಇಂದು ನಮ್ಮನ್ನು ಸೋಲಿಸಿ ಬಿಟ್ಟಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ನ್ಯಾಯಾಲಯಕ್ಕೆ ಸಾರ್ವಜನಿಕರ ಕಾಳಜಿಯ ಬಗ್ಗೆ ಯೋಚನೆಯಿಲ್ಲ, ಇದು ಕೇವಲ ನಿರ್ಭಯಾಳಿಗಾಗಿನ ಹೋರಾಟವಲ್ಲ, ಈ ದೇಶದಲ್ಲಿ ಅಸುರಕ್ಷಿತವಾಗಿರುವ ನೂರಾರು ಹೆಣ್ಣುಮಕ್ಕಳಿಗಾಗಿ. ಕಾನೂನು ಬದಲಾಗುವವರೆಗೂ ನಾನು ಹೋರಾಡುತ್ತೇನೆ’.
ನಾನು ಸೋತಿಲ್ಲ, ಸುಪ್ರೀಂ ನಿರ್ಧಾರ ನನ್ನನ್ನು ತಡೆಯಲಾರದು, ಧೀರ್ಘ ಯುದ್ಧವನ್ನು ನಾನು ಮಾಡಬೇಕಿದೆ. ಬಾಲಪರಾಧಿ ತಿದ್ದುಪಡಿ ಕಾಯ್ದೆ ಬರುವವರೆಗೂ ನಾನು ಹೋರಾಡುತ್ತೇನೆ.
ಬಾಲಪರಾಧಿಯನ್ನು ಬಂಧನದಲ್ಲೇ ಇಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ನ್ಯಾಯಾಲಯ ಹೇಳಿದೆ, ಹಾಗಾದರೆ ಪ್ರಕರಣದ ಇತರ ಆರೋಪಿಗಳಿಗೆ ಯಾಕೆ ಇನ್ನೂ ಶಿಕ್ಷೆಯನ್ನು ವಿಧಿಸಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಲ್ ಅವರೂ ಬಾಲಪರಾಧಿ ಬಿಡುಗಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಇಂದು ಮಹಿಳೆಯರಿಗೆ ಕರಾಳ ದಿನ. ಕಾಯ್ದೆಯನ್ನು ರಾಜ್ಯಸಭೆಯಲ್ಲಿ ಮಂಡನೆಗೊಳಿಸದೆ ನಮಗೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.