News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಾಕೀರ್ ನಾಯ್ಕ್ ಪ್ರವೇಶಕ್ಕೆ ಅವಕಾಶ ನೀಡಿದರೆ ತೀವ್ರ ಪ್ರತಿಭಟನೆ

ಬೆಳ್ತಂಗಡಿ: ಹಿಂದೂ ದೇವ-ದೇವತೆಗಳ ಅವಹೇಳನ ಮಾಡುವ ಇಸ್ಲಾಂ ಮತ ಪ್ರಚಾರಕ ಜಾಕೀರ್ ನಾಯ್ಕ ಅವರು ಕರ್ನಾಟಕಕ್ಕೆ ಬರುವುದನ್ನು ಶ್ರೀರಾಮ ಸೇನೆ ಉಗ್ರವಾಗಿ ಖಂಡಿಸುತ್ತದೆ. ಅವರ ಪ್ರವೇಶಕ್ಕೆ ಅವಕಾಶ ನೀಡಿದರೆ ತೀವ್ರ ಪ್ರತಿಭಟನೆ ನಡೆಸಲಾಗುವುದಲ್ಲದೆ, ಈ ಬಗ್ಗೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹೂಡಲಾಗುವುದು ಎಂದು ಶ್ರೀರಾಮ ಸೇನೆ ಕರ್ನಾಟಕ ಇದರ ಸ್ಥಾಪಕಾಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಸಿದ್ದಾರೆ.

14dlPRESSMEET

ಅವರು ಸೋಮವಾರ ಬೆಳ್ತಂಗಡಿ ವಾರ್ತಾಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು. ಈಗಾಗಲೇ ರಾಜ್ಯದಲ್ಲಿ ಟಿಪ್ಪು ಜಯಂತಿಯಿಂದಾಗಿ ಅಸಮಾಧಾನ ಎದ್ದಿದೆಯಲ್ಲದೆ ಮೂರು ಸಾವು ಕೂಡ ಸಂಭವಿಸಿದೆ. ಮತೀಯ ಪ್ರಚೋದನೆ ಮಾಡುವ, ಹಿಂದೂ ದೇವರ ತುಚ್ಛೀಕರಿಸುವ ಜಾಕೀರ್ ನಾಯ್ಕರ ಸಭೆಯನ್ನು ಮಂಗಳೂರಿನಲ್ಲಿ ನಡೆಸುವುದಕ್ಕೆ ಸೇನೆಯ ವಿರೋಧವಿದೆ ಮತ್ತು ಕರ್ನಾಟಕಕ್ಕೇ ಪ್ರವೇಶ ಕೊಡಬಾರದು. ಮಂಗಳೂರು ಸೂಕ್ಷ್ಮ ಪ್ರದೇಶವಾಗಿದ್ದು ಅವರ ಸಭೆಯಿಂದಾಗಿ ಗೊಂದಲ, ಗಲಭೆ, ಬೇರೆ, ಬೇರೆ ಪ್ರತಿಕ್ರಿಯೆಗಳು ಉಂಟಾಗಬಹುದು. ಜಿಲ್ಲಾ ಉಸ್ತುವಾರಿ ಮಂತ್ರಿ ರಮಾನಾಥ ರೈ ಅವರು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿರುವುದು ಖಂಡನಾರ್ಹ. ಮುಸ್ಲಿಂ ಸಮುದಾಯದ ಓಟಿಗೋಸ್ಕರ, ಛಲಕ್ಕೋಸ್ಕರ ಈ ರೀತಿ ಮಾಡುತ್ತಿದ್ದಾರೆ. ಮುಂದೆ ಏನಾದರೂ ಅನಾಹುತವಾದರೆ ಸಚಿವ ರೈ ಗಳೇ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದ ಅವರು ಶಾಂತಿ ಕಾಪಾಡುವ ದೃಷ್ಟಿಯಿಂದ ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳು ಗಂಭೀರವಾಗಿ ಚಿಂತಿಸಿ, ಸಭೆಯನ್ನು ತಡೆಯಬೇಕು ಎಂದು ಆಗ್ರಹಿಸಿದರು.

ಜಾಕೀರ್ ಐಎಸ್‌ಐಎಸ್, ಟಿಪ್ಪು, ಲಾಡೆನ್ ವರ್ಗಕ್ಕೆ ಸೇರಿದವರು. ಅವರಿಗೂ ಜಾಕೀರ್‌ಗೂ ಯಾವುದೇ ವ್ಯತ್ಯಾಸವಿಲ್ಲ. ಇವರನ್ನು ಬ್ರಿಟನ್, ಕೆನಡಾ, ಮಲೇಷಿಯಾ ರಾಷ್ಟ್ರಗಳು ನಿಷೇಧಿಸಿವೆ. ಅದರಲ್ಲೂ ಮಲೇಷಿಯಾದಂತಹ ಮುಸ್ಲಿಂ ದೇಶ ನಿಷೇಧ ಹೇರಿರುವುದು ಗಮನಾರ್ಹ. ಅವರ ಪೀಸ್ ಟಿವಿಯನ್ನು ಹಿಂದಿನ ಕಾಂಗ್ರೇಸ್ ಸರಕಾರವೇ ನಿಷೇಧಿಸಿದೆ. ಭಯೋತ್ಪಾದಕರ ಬೆಂಬಲಾರ್ಥವಾಗಿ ಅವರ ಹೇಳಿಕೆಗಳು ಇವೆ. ಇಂಡಿಯನ್ ಮುಜಾಹಿದ್‌ನ ವ್ಯಕ್ತಿಯೊಬ್ಬ ಅವರಿಗೆ ಆರ್ಥಿಕ ಸಲಹೆಗಾರನಾಗಿ ಕೆಲಸಮಾಡುತ್ತಿದ್ದಾನೆ. ಇಂತಹ ದೇಶದ್ರೋಹಿ ವ್ಯಕ್ತಿಯ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದರು.

ಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ವಾಲ್ಕೆ, ವಿಭಾಗ ಸಂಯೋಜಕ ಆನಂದ ಅಡ್ಯಾರ್, ಜಿಲ್ಲಾಧ್ಯಕ್ಷ ಜೀವನ್ ನೀರುಮಾರ್ಗ, ತಾಲೂಕು ಅಧ್ಯಕ್ಷ ಸಂತೋಷ್ ಧರ್ಮಸ್ಥಳ, ತಾಲೂಕು ಸಂಘಟನಾ ಪ್ರಮುಖ್ ಪ್ರಸಾದ್ ಉಜಿರೆ ಇದ್ದರು.

ಮುಂದಿನ ವರ್ಷ ಶ್ರೀರಾಮ ಸೇನೆಗೆ 10 ವರ್ಷ ತುಂಬಲಿದೆ. ದಶಮಾನೋತ್ಸವ ಸಂದರ್ಭ ನೂರು ಯುವ ಪ್ರಚಾರಕರನ್ನು ಸಿದ್ದಗೊಳಿಸಿ ಲವ್ ಜೆಹಾದ್, ಗೋಹತ್ಯೆ, ಭಯೋತ್ಪಾದನೆ ವಿರುದ್ದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು. ಈಗಾಗಲೇ 68 ಮಂದಿ ಯುವಕರು ನೋಂದಾವಣೆ ಮಾಡಿದ್ದಾರೆ – ಮುತಾಲಿಕ್.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top