ನವದೆಹಲಿ: ದೆಹಲಿಯಲ್ಲಿ ನಡೆದಿರುವ ಮತ್ತೊಂದು ಘಟನೆ ಎಎಪಿ ಮತ್ತು ಕೇಂದ್ರದ ನಡುವಣ ಸಮರವನ್ನು ತೀವ್ರಗೊಳಿಸಿದೆ. ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಛೇರಿಯ ಮೇಲೆ ದಾಳಿ ನಡೆಸಿದೆ ಮತ್ತು ಅದಕ್ಕೆ ಬೀಗ ಮುದ್ರೆ ಹಾಕಿದೆ.
ಕೇಜ್ರಿವಾಲ್ ಅವರು ಮುಖ್ಯ ಕಾರ್ಯದರ್ಶಿಯಾಗಿರುವ ರಾಜೇಂದ್ರ ಕುಮಾರ್ ಮತ್ತು ಇತರ ಐವರು ಖಾಸಗಿ ವ್ಯಕ್ತಿಗಳ ವಿರುದ್ಧ ಅಪರಾಧ ಕೃತ್ಯದಡಿ ಭ್ರಷ್ಟಾಚಾರ ನಿಗ್ರಹ ದಳ ಪ್ರಕರಣ ದಾಖಲಿಸಿಕೊಂಡಿದೆ. ಕೆಲವು ದೆಹಲಿ ಸರ್ಕಾರಿ ಅಧಿಕಾರಿಗಳು ಸ್ವಯಂ ನಿವೃತ್ತಿಯನ್ನು ಪಡೆದು ಸಾಫ್ಟ್ವೇರ್ ಕಂಪನಿಗೆ ಪಲಾಯನ ಮಾಡಿದ್ದಾರೆ. ಅವರಿಗೆ ಹಲವಾರು ವರ್ಷಗಳಿಂದ ಫೇವರ್ ಮಾಡುತ್ತಿದ್ದ ಮತ್ತು ಕಾಂಟ್ರ್ಯಾಕ್ಟ್ಗಳನ್ನು ತೆಗೆಸಿಕೊಡುತ್ತಿದ್ದರು ಎಂಬ ಆರೋಪವಿದೆ.
ಹೀಗಾಗಿ ಸಿಬಿಐ ಆತನ ಕಛೇರಿ ಮತ್ತು ಇತರ ನಾಲ್ಕು ಕಡೆ ದಾಳಿ ನಡೆಸಿದೆ. ಈ ವೇಳೆ ಇಡೀ ಅಂತಸ್ತಿಗೇ ಬೀಗ ಜಡಿದಿದೆ. ಕೇಜ್ರಿವಾಲ್ ಕಛೇರಿಯೂ ಈತನ ಕಛೇರಿಯಿರುವ ಅಂತಸ್ತಿನಲ್ಲೇ ಇದೆ ಎನ್ನಲಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ವಿರುದ್ಧ ಕೇಜ್ರಿವಾಲ್ ಕಿಡಿಕಾರಿದ್ದಾರೆ. ಮಾತ್ರವಲ್ಲ ಕೆಟ್ಟ ಪದಪ್ರಯೋಗಗಳ ಮೂಲಕ ನಿಂದಿಸಿದ್ದಾರೆ. ನನ್ನನ್ನು ರಾಜಕೀಯವಾಗಿ ಬಗ್ಗಿಸಲಾಗದ ಮೋದಿ ಸಿಬಿಐನ್ನು ಛೂ ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಮೋದಿಯೊಬ್ಬ ಹೇಡಿ, ಸೈಕೋಪಾತ್ ಎಂದು ನಿಂದಿಸಿದ್ದಾರೆ.
ಕೇಜ್ರಿವಾಲ್ ಪದಪ್ರಯೋಗವನ್ನು ಬಿಜೆಪಿ ಕಟುವಾಗಿ ಖಂಡಿಸಿದೆ. ಅಲ್ಲದೇ ಸಿಬಿಐ ಅದರ ಕಾರ್ಯವನ್ನು ಮಾಡಿದೆ, ಇದರಲ್ಲಿ ನಮ್ಮ ಹಸ್ತಕ್ಷೇಪವೇನೂ ಇಲ್ಲ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.