ಹೈದರಾಬಾದ್: ತನ್ನ ಟ್ಯಾಬ್ಲೋ ಎರಡು ಬಾರಿ ನಿರಾಕರಣೆಗೊಳಪಟ್ಟ ಹಿನ್ನಲೆಯಲ್ಲಿ ತೆಲಂಗಾಣ ೨೦೧೬ರ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದೆ.
ತನ್ನ ರಾಜ್ಯ ರಚಿಸಲ್ಪಟ್ಟ ಬಳಿಕ ಎರಡು ಗಣರಾಜ್ಯೋತ್ಸವಗಳಿಗೂ ತೆಲಂಗಾಣ ತನ್ನ ಸಂಸ್ಕೃತಿ ಮತ್ತು ಕಲೆಯನ್ನು ಬಿಂಬಿಸುವ ಟ್ಯಾಬ್ಲೋ ಮಾಡೆಲ್ಗಳನ್ನು ಮಾಡಿ ಅದನ್ನು ರಕ್ಷಣಾ ಸಚಿವಾಲಯದ ಮುಂದೆ ನವದೆಹಲಿಯಲ್ಲಿ ಪ್ರದರ್ಶಿಸಿದೆ ಆದರೆ ಇದನ್ನು ಆಯ್ಕೆ ಸಮಿತಿ ಪೆರೇಡ್ಗೆ ನಿರಾಕರಿಸಲಾಗಿದೆ.
ಇದರಿಂದ ಬೇಸರಕ್ಕೆ ಒಳಗಾಗಿರುವ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್) ನಾಯಕರು, ತಾವು ಈ ಬಾರಿ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಭಾಗವಹಿಸುವುದಿಲ್ಲ ಎಂದು ಲೋಕಸಭೆಗೆ ತಿಳಿಸಿದ್ದಾರೆ.
ನಿರಾಕರಣೆ ಖಚಿತವೆಂದಾದ ಬಳಿಕ ಟ್ಯಾಬ್ಲೋಗಳನ್ನು ರಚಿಸಿ ಪ್ರದರ್ಶನಕ್ಕೆ ಕಳುಹಿಸುವುದಕ್ಕೆ ಅರ್ಥವೇ ಇಲ್ಲ ಎಂದಿದ್ದಾರೆ.
2015ರಲ್ಲಿ ಆಯ್ಕೆ ಸಮಿತಿ ನಿರಾಕರಿಸಿದರೂ ರಾಜ್ಯದ ವಿಶೇಷ ಮನವಿಯ ಮೇರೆಗೆ ತೆಲಂಗಾಣಕ್ಕೆ ಪೆರೇಡ್ನಲ್ಲಿ ಟ್ಯಾಬ್ಲೋ ಪ್ರದರ್ಶಿಸುವ ಅವಕಾಶವನ್ನು ನೀಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.