ನವದೆಹಲಿ: ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ಸದಾ ಟೀಕಾ ಪ್ರಹಾರ ಮಾಡುತ್ತಿರುವ ರಾಹುಲ್ ಗಾಂಧಿ ಇದೀಗ ಟೀಕೆಗೆ ಹೊಸ ವಿಷಯಗಳನ್ನು ಆಯ್ದುಕೊಂಡಿದ್ದಾರೆ.
ಅವರದ್ದೇ ಪಕ್ಷ ಆಳುತ್ತಿರುವ ಅಸ್ಸಾಂನಲ್ಲಿ ದೇಗುಲಕ್ಕೆ ಪ್ರವೇಶ ಮಾಡದಂತೆ ಆರ್ಎಸ್ಎಸ್ ಮಂದಿ ನನ್ನನ್ನು ತಡೆದರು ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.
ಅಸ್ಸಾಂಗೆ ಭೇಟಿ ನೀಡಿದ್ದ ವೇಳೆ ಬರ್ಪೆಟಾ ದೇಗುಲಕ್ಕೆ ಹೋಗಲು ಬಯಸಿದ್ದೆ, ಆದರೆ ಆರ್ಎಸ್ಎಸ್ ಮಂದಿ ಮಹಿಳೆಯರನ್ನು ನನ್ನ ಮುಂದೆ ನಿಲ್ಲಿಸಿ ದೇಗುಲದೊಳಕ್ಕೆ ಪ್ರವೇಶ ಮಾಡದಂತೆ ತಡೆದರು. ಇದು ಬಿಜೆಪಿಗರು ಕಾರ್ಯ ನಿರ್ವಹಿಸುತ್ತಿರುವ ರೀತಿ ಎಂದು ಆಪಾದಿಸಿದ್ದಾರೆ. ಅಲ್ಲದೇ ’ನನ್ನನ್ನು ತಡೆಯಲು ಅವರು ಯಾರು? ಎಂದು ಪ್ರಶ್ನಿಸಿದ್ದಾರೆ.
ಆದರೆ ಅವರದ್ದೇ ಪಕ್ಷ ಆಡಳಿತದಲ್ಲಿರುವ ರಾಜ್ಯದಲ್ಲಿ ಇಂತಹ ಕೃತ್ಯಗಳು ನಡೆದಾಗ ಅದನ್ನು ತಡೆಯುವ ಶಕ್ತಿ ಅಲ್ಲಿನ ಸರ್ಕಾರಕ್ಕಿಲ್ಲವೇ ಎಂದು ಹಲವಾರು ಮಂದಿ ಪ್ರಶ್ನಿಸಿದ್ದಾರೆ.
ಇನ್ನೊಂದೆಡೆ ಕೇರಳದಲ್ಲಿ ಕಾಂಗ್ರೆಸ್ ಮುಖಂಡ ಆರ್.ಶಂಕರ್ ಅವರ ಪ್ರತಿಮೆ ಅನಾವರಣ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಆಗಮಿಸಲಿದ್ದಾರೆ, ಆದರೆ ಈ ಕಾರ್ಯಕ್ರಮಕ್ಕೆ ಅಲ್ಲಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರನ್ನು ಆಹ್ವಾನಿಸಲಾಗಿಲ್ಲ, ಇದರ ಹಿಂದೆ ಪ್ರಧಾನಿ ಮತ್ತು ಬಿಜೆಪಿಯ ಕೈವಾಡವಿದೆ ಎಂದು ರಾಹುಲ್ ಆರೋಪಿಸಿದ್ದಾರೆ.
ಮೂಲಗಳ ಪ್ರಕಾರ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಚಾಂಡಿ ಅವರ ಹೆಸರಿದೆ, ಆದರೆ ಆಯೋಜಕರು ಅವರಿಗೆ ಆಹ್ವಾನವನ್ನು ನೀಡಿಲ್ಲ ಎನ್ನಲಾಗಿದೆ. ಹಿಂದುಳಿದ ಇಝವ ಸಮುದಾಯದ ಕಮಿಟಿ ಈ ಸಮಾರಂಭವನ್ನು ಆಯೋಜಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.