ನವದೆಹಲಿ: ಭಾರತದಲ್ಲಿ ಅಸಹಿಷ್ಣುತೆ ಇದ್ದಿದ್ದರೆ ನಾನು ಈ ದೇಶದ ನಾಗರಿಕತೆಗಾಗಿ ಹಂಬಲಿಸುತ್ತಿದ್ದೆನೆ? ಹೀಗೊಂದು ಮರುಪ್ರಶ್ನೆ ಹಾಕಿದವರು ಪಾಕಿಸ್ಥಾನ ಮೂಲದ ಗಾಯಕ ಅದ್ನಾನ್ ಸಮಿ. ದೇಶದಲ್ಲಿ ಅಸಹಿಷ್ಣುತೆ ತಾಂಡವಾಡುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ, ಅದಕ್ಕೆ ನೀವೆನೆನ್ನುತ್ತೀರಿ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು ನೀಡಿದ ಪ್ರತಿಕ್ರಿಯೆ ಇದಾಗಿದೆ.
‘ಒಂದು ವೇಳೆ ಈ ದೇಶದಲ್ಲಿ ಅಸಹಿಷ್ಣುತೆ ಇದೇ ಎಂದಾಗಿದ್ದರೆ ನಾನು ಇಲ್ಲಿನ ನಾಗರಿಕತೆಯನ್ನು ಬಯಸುತ್ತಿದ್ದೆನೆ? ನನಗೆ ಏರು ಧ್ವನಿಯಲ್ಲಿ ಮಾತನಾಡುವುದಕ್ಕಿಂತಲೂ ಕಾರ್ಯ ಮಾಡುವುದರಲ್ಲಿ ಹೆಚ್ಚಿನ ನಂಬಿಕೆ ಇದೆ’ ಎಂದು ಅದ್ನಾನ್ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಒಬ್ಬ ಗಾಯಕನ ಕೆಲಸ ಹಾಡುವುದು ಮತ್ತು ಸೌಹಾರ್ದತೆ ಸೃಷ್ಟಿಸುವುದು, ಸಂಗೀತಕ್ಕೆ ಧರ್ಮವಿಲ್ಲ, ಯಾವುದೇ ಹಾಡನ್ನು ಕೇಳಿದಾಗ ಅದರ ದೇಶ, ಅದರ ಹಾಡುಗಾರ, ಆತನ ಬಣ್ಣ, ಆತನ ಧರ್ಮ ಯಾವುದನ್ನು ಲೆಕ್ಕಿಸದೆಯೇ ನಾನು ತಲೆತೂಗುತ್ತೇನೆ. ಭಾರತದಲ್ಲಿ ಒಳ್ಳೆಯ ಕಾರ್ಯ ನಡೆದಾಗ ನನಗೆ ಹೆಮ್ಮೆಯಾಗುತ್ತದೆ, ಕೆಟ್ಟದ್ದು ನಡೆದಾಗ ನನಗೆ ಬೇಸರವಾಗುತ್ತದೆ, ಅಷ್ಟರ ಮಟ್ಟಿಗೆ ಈ ದೇಶದೊಂದಿಗೆ ನಾನು ಮಿಲಿತವಾಗಿದ್ದೇನೆ ಎಂದಿದ್ದಾರೆ.
ಅದ್ನಾನ್ ಸಮಿ, ಭಾರತದಲ್ಲಿ ಯಶಸ್ಸಿನ ಉತ್ತುಂಗವನ್ನು ಏರಿದ ಪಾಕಿಸ್ಥಾನ ಮೂಲದ ಹಾಡುಗಾರ. ಆತ ಶತ್ರು ರಾಷ್ಟ್ರದಿಂದ ಬಂದವನು ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ ಈ ದೇಶದ ಜನರು ಆತನ ಸಂಗೀತವನ್ನು ಮೆಚ್ಚಿದ್ದಾರೆ. ಕಳೆದ ಹದಿಮೂರು ವರ್ಷಗಳಿಂದಲೂ ಆತ ಈ ದೇಶದಲ್ಲಿ ನೆಲೆಸಿದ್ದಾನೆ. ಬಹುಶಃ ಭಾರತೀಯರ ಸಹಿಷ್ಣುತೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಮತ್ತೊಂದಿಲ್ಲ ಎಂದೆನಿಸುತ್ತದೆ. ಪಾಕಿಸ್ಥಾನದಂತಹ ದೇಶದಲ್ಲಿ ಹುಟ್ಟಿ ಬೆಳೆದ ಅದ್ನಾನ್ಗೆ ಇದು ಸ್ಪಷ್ಟವಾಗಿ ಅರ್ಥವಾಗಿದೆ.
ಭಾರತದ ಪರವಾಗಿ ಅಪಾರ ಅಭಿಮಾನವನ್ನು ಹೊಂದಿರುವ ಅದ್ನಾನ್ ಅವರಿಗೆ ಸರ್ಕಾರ ಪ್ರಸ್ತುತ ಮಾನವೀಯತೆಯ ಆಧಾರದಲ್ಲಿ ಇಲ್ಲಿ ನೆಲೆಸಲು ಅನುವು ಮಾಡಿಕೊಟ್ಟಿದೆ. ಅದ್ನಾನ್ ಈ ದೇಶದ ನಾಗರಿಕತೆಯನ್ನು ಪಡೆಯುವ ಪ್ರಯತ್ನದಲ್ಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.