ಸಿಂಗಾಪುರ: ಸಿಂಗಾಪುರದಲ್ಲಿನ ಭಾರತೀಯ ಮೂಲದ ಬರಹಗಾರ ಜಮಾಲುದ್ದೀನ್ ಮೊಹಮ್ಮದ್ ಸಾಲಿ ಅವರು ಪ್ರತಿಷ್ಠಿತ ಈಶಾನ್ಯ ಏಷ್ಯಾ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
76 ವರ್ಷದ ಜಮಾಲುದ್ದೀನ್ ಕಳೆದ ೫೦ ವರ್ಷಗಳಿಂದ ಬರವಣಿಗೆಯಲ್ಲಿ ನಿರತರಾಗಿದ್ದಾರೆ, ಅವರ 57 ಪುಸ್ತಕಗಳನ್ನು ಯೂನಿವರ್ಸಿಟಿಯಲ್ಲಿ ಅಧ್ಯಯನಕ್ಕೆ ಬಳಸಿಕೊಳ್ಳಲಾಗುತ್ತಿದೆ. ಸಿಂಗಾಪುರದ ಪ್ರತಿಷ್ಠಿತ ಕಲ್ಚರಲ್ ಮೆಡಲಿಯನ್ ಅವಾರ್ಡ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರಿಗೆ ಒಲಿದಿವೆ. ತಮಿಳುನಾಡು ಸರ್ಕಾರವೂ ಇವರಿಗೆ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
ಪುಸ್ತಕ ಮಾತ್ರವಲ್ಲದೇ 80 ನಾಟಕ ಮತ್ತು 400 ಸಣ್ಣ ಕಥೆಗಳನ್ನು ಇವರು ಬರೆದಿದ್ದಾರೆ. ಇವುಗಳನ್ನು ಭಾರತ ಮತ್ತು ಸಿಂಗಾಪುರದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಸಾಂಸ್ಕೃತಿ ಪಠ್ಯವಾಗಿ ಬಳಸಿಕೊಳ್ಳಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.