ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ತು ಕಲಾಪಕ್ಕೆ ನಿರಂತರವಾಗಿ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಕಿಡಿಕಾರಿದ್ದಾರೆ.
ಕಾಂಗ್ರೆಸ್ ವಿರುದ್ಧ ಫೇಸ್ ಬುಕ್ ಪೋಸ್ಟ್ನಲ್ಲಿ ಕಿಡಿಕಾರಿರುವ ಅವರು, ‘ಕಾನೂನಿನ ಮುಂದೆ ಎಲ್ಲರಿಗೂ ಸಮಾನತೆ ಇದೆ. ಯಾರೊಬ್ಬರು ಕಾನೂನಿಗಿಂತ ದೊಡ್ಡವರಲ್ಲ. ರಾಣಿ ಕಾನೂನಿಗೆ ಉತ್ತರಿಸುವ ಅಗತ್ಯವಿಲ್ಲ ಎಂಬ ಸರ್ವಾಧಿಕಾರಿ ತೀರ್ಮಾನವನ್ನು ಭಾರತ ಎಂದಿಗೂ ತೆಗೆದುಕೊಂಡಿಲ್ಲ’ ಎಂದಿದ್ದಾರೆ. ಈ ಮೂಲಕ ಕಾಂಗ್ರೆಸ್ ನಾಯಕರ ಧೋರಣೆಯನ್ನು ಕಟುವಾಗಿ ಖಂಡಿಸಿದ್ದಾರೆ.
‘ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸರ್ಕಾರವಾಗಲಿ, ಸಂಸತ್ತಾಗಲಿ ಸಹಾಯ ಮಾಡಲು ಸಾಧ್ಯವಿಲ್ಲ. ಹೀಗಿರುವಾಗ ಸಂಸತ್ತು ಅಧಿವೇಶನಕ್ಕೆ ಏಕೆ ತೊಂದರೆಯುಂಟು ಮಾಡುತ್ತಿದ್ದೀರಿ ಮತ್ತು ಶಾಸಕಾಂಗದ ಚಟುವಟಿಕೆ ಮುಂದುವರೆಯುವುದನ್ನು ತಡೆಯುತ್ತಿದ್ದೀರಿ?’
ಸೋನಿಯಾ ಗಾಂಧೀ ಮತ್ತು ರಾಹುಲ್ ರಾಜಕೀಯ ಪಿತೂರಿಯ ಸಂತ್ರಸ್ಥರು ಎಂಬುದು ಅಪಪ್ರಚಾರ. ಯಾವುದೇ ಹಣವನ್ನು ನೀಡದೆ ಅವರು ಅಪಾರ ಮೌಲ್ಯದ ಆಸ್ತಿಯನ್ನು ಒಳಹಾಕಿದ್ದಾರೆ, ತೆರಿಗೆ ವಿನಾಯಿತಿ ಆದಾಯವನ್ನು ಅವರು ವಿನಾಯಿತಿ ಇಲ್ಲದ ಕಾರಣಕ್ಕೆ ಬಳಸಿದ್ದಾರೆ, ರಾಜಕೀಯ ಪಕ್ಷದ ಆದಾಯವನ್ನು ರಿಯಲ್ ಎಸ್ಟೇಟ್ ಸಮುದಾಯಕ್ಕೆ ಬಳಸಿದ್ದಾರೆ. ಇದೀಗ ಕಾಂಗ್ರೆಸ್ ತಾನೇ ರಚಿಸಿರುವ ಚಕ್ರವ್ಯೂಹದಿಮದ ಹೊರಬರುವ ದಾರಿಯನ್ನು ಕಂಡುಕೊಳ್ಳಬೇಕಿದೆ’ ಎಂದಿದ್ದಾರೆ.
2012ರಿಂದಲೂ ಖಾಸಗಿ ವ್ಯಕ್ತಿ ಸುಬ್ರಹ್ಮಣ್ಯಂ ಸ್ವಾಮಿಯವರು ಈ ಪ್ರಕರಣದ ಬಗ್ಗೆ ಹೋರಾಟ ನಡೆಸುತ್ತಿದ್ದಾರೆ. ೨೦೧೩ರಲ್ಲಿ ಅವರು ಬಿಜೆಪಿ ಸೇರಿದರು. ಆ ಬಳಿಕ ಕಾಂಗ್ರೆಸ್ ಇದು ರಾಜಕೀಯ ಪಿತೂರಿ ಎನ್ನಲಾರಂಭಿಸಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.