ಮುಂಬಯಿ: ಹಿಂದೂ ಮಹಾಸಭಾದ ಮುಖಂಡ ಸ್ವಾಮಿ ಚಕ್ರಪಾಣಿ ಹರಾಜು ಪ್ರಕ್ರಿಯೆಯ ಮೂಲಕ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಕಾರನ್ನು 3.2 ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. ಆ ಕಾರನ್ನು ಸುಡುವ ಸಲುವಾಗಿಯೇ ಖರೀದಿ ಮಾಡಿದ್ದಾಗಿ ಅವರು ಹೇಳಿದ್ದಾರೆ.
ದಕ್ಷಿಣ ಮುಂಬಯಿಯ ಹೋಟೆಲ್ ಡಿಪ್ಲೊಮ್ಯಾಟ್ನಲ್ಲಿ ದಾವೂದ್ ಬಳಸುತ್ತಿದ್ದ ಹ್ಯೂಂಡಾಯ್ ಅಸೆಂಟ್(ಎಂಎಚ್-04-ಎಎಕ್ಸ್-3676) ಕಾರನ್ನು ಹರಾಜಿಗೆ ಇಡಲಾಗಿತ್ತು, ರೂ.15,700ರಿಂದ ಹರಾಜು ಆರಂಭವಾಗಿತ್ತು. ಅತ್ಯಂತ ಕೆಟ್ಟ ಸ್ಥಿತಿಯಲ್ಲಿರುವ ಈ ಕಾರನ್ನು 4 ವರ್ಷದಿಂದ ಘಾಟ್ಕೋಪರ್ ಸರ್ಕಾರಿ ಸೊಸೈಟಿಯಲ್ಲಿ ಇಡಲಾಗಿತ್ತು.
ಇದೀಗ ಈ ಕಾರನ್ನು ಖರೀದಿಸಿರುವ ಸ್ವಾಮಿ ಚಕ್ರಪಾಣಿ ಅದನ್ನು ಸುಟ್ಟು ಹಾಕಲು ಮುಂದಾಗಿದ್ದಾರೆ. ಈ ಮೂಲಕವಾದರೂ ದಾವೂದ್ ಮೇಲಿನ ಸೇಡನ್ನು ತೀರಿಸುವ ಉದ್ದೇಶ ಅವರದ್ದು.
ಹರಾಜು ಪ್ರಕ್ರಿಯೆ ನಡೆಯುವ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಾಟು ಮಾಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.