ಶ್ರೀನಗರ: ಪ್ರತ್ಯೇಕತಾವಾದಿ ಮಹಿಳಾ ಸಂಘಟನೆ ದುಖ್ತರನ್ ಇ ಮಿಲ್ಲತ್ನ ಬೆದರಿಕೆಗೆ ಜಗ್ಗದೆ ಶ್ರೀನಗರದ ಶಾಲಾ ಬಾಲಕಿಯರು ಸೇನಾ ಪ್ರಾಯೋಜಿತ 10 ದಿನಗಳ ಪ್ರವಾಸಕ್ಕೆ ತೆರಳಿ ಶಬ್ಬಾಸ್ಗಿರಿ ಪಡೆದುಕೊಂಡಿದ್ದಾರೆ.
ಯುವತಿಯರಿಗೆ ಉತ್ತಮ ಶಿಕ್ಷಣ, ಮಹಿಳಾ ಸಬಲೀಕರಣ ಮುಂತಾದ ಉದ್ದೇಶಗಳನ್ನಿಟ್ಟುಕೊಂಡು ಭಾರತೀಯ ಸೇನೆ ಶ್ರೀನಗರದ 30 ಶಾಲಾ ಬಾಲಕಿಯರಿಗೆ 10 ದಿನಗಳ ಶೈಕ್ಷಿಣಕ ಪ್ರವಾಸವನ್ನು ಆಯೋಜಿಸಿದೆ. ದೇಶದ ವಿವಿಧ ಭಾಗಗಳನ್ನು ಸುತ್ತುವ ಅವಕಾಶ ಈ ಬಾಲಕಿಯರಿಗೆ ಒಲಿದಿದೆ.
ಆದರೆ ದುಖ್ತರನ್ ಇ ಮಿಲ್ಲತ್ನ ಮುಖ್ಯಸ್ಥೆ ಆಯೇಷಾ ಅದ್ರಂಬಿ ಬಾಲಕಿಯರನ್ನು ಸೇನಾ ಪ್ರಾಯೋಜಿತ ಟೂರ್ಗೆ ಕಳುಹಿಸದಂತೆ ಎಚ್ಚರಿಕೆ ನೀಡಿದ್ದಾಳೆ. ಈ ಟೂರ್ಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿರುವ ಪೋಷಕರಿಗೆ ನಾಚಿಕೆಯಾಗಬೇಕು. ನಾವು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿಲ್ಲ, ಇಂತಹ ಕಾರ್ಯಗಳಿಂದ ದೂರವಿರಿ ಎಂದು ಎಚ್ಚರಿಸುತ್ತಿದ್ದೇನೆ ಎಂದಿದ್ದಾಳೆ.
ಆದರೆ ಈಕೆಯ ಎಚ್ಚರಿಕೆಯನ್ನು ಧಿಕ್ಕರಿಸಿ ಬಾಲಕಿಯರು ಪ್ರವಾಸಕ್ಕೆ ತೆರಳಿದ್ದಾರೆ ಶನಿವಾರದಿಂದ ಪ್ರವಾಸ ಆರಂಭಗೊಂಡಿದೆ. ಪೋಷಕರಿಗೆ ಸೇನೆ, ಶಿಕ್ಷಕರು ಶಬ್ಬಾಸ್ ಗಿರಿ ನೀಡಿದ್ದಾರೆ. ಅಲ್ಲದೇ ಶೈಕ್ಷಣಿಕ ಪ್ರವಾಸ ಕೈಗೊಂಡಿರುವ ಸೇನೆಯ ಕಾರ್ಯಕ್ಕೆ ಶ್ಲಾಘನೆಗಳು ವ್ಯಕ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.