ನವದೆಹಲಿ: ತೀವ್ರ ಸ್ವರೂಪದಲ್ಲಿ ಸುರಿದ ಮಳೆ ಚೆನ್ನೈ ಜನತೆಯನ್ನು ಸಂಕಷ್ಟದಲ್ಲಿ ದೂಡಿದೆ. ಅಲ್ಲಿ ಜನಜೀವನ ಅಸ್ತವ್ಯಸ್ಥವಾಗಿದ್ದು ಇತರರೊಂದಿಗೆ ಸಂಪರ್ಕ ಸಾಧಿಸುವುದೇ ದೊಡ್ಡ ಸಾಹಸವಾಗಿದೆ. ಈ ಹಿನ್ನಲೆಯಲ್ಲಿ ಟೆಲಿಕಾಂ ಕಂಪನಿಗಳು ನೆರವಿನ ಹಸ್ತ ಚಾಚಿದೆ.
ಏರ್ಟೆಲ್, ಬಿಎಸ್ಎನ್ಎಲ್, ರಿಕಾಂ, ವೋಡಾಫೋನ್ ಚೆನ್ನೈ ಜನತೆಗೆ ಉಚಿತ ಟಾಕ್ಟೈಮ್, ಫ್ರೀ ಮೊಬೈಲ್ ಡಾಟಾ ನೀಡಿದೆ.
ಏರ್ಟೆಲ್ 30 ರೂಪಾಯಿಗಳ ಉಚಿತ ಟಾಕ್ಟೈಮ್ ಕ್ರೆಡಿಟ್ ನೀಡಿದೆ, ಅಲ್ಲದೇ ಎಲ್ಲಾ ಪ್ರೀ ಪೇಯ್ಡ್ ಗ್ರಾಹಕರ 10 ನಿಮಿಷಗಳ ಏರ್ಟೆಲ್ ಟು ಏರ್ಟೆಲ್ ಕಾಲ್ನ್ನು 2 ದಿನಗಳ ಅವಧಿಗೆ ಉಚಿತವಾಗಿಸಿದೆ. 2 ದಿನಗಳ ಅವಧಿಯ 50 ಎಂಬಿ ಫ್ರೀ ಮೊಬೈಲ್ ಡಾಟಾ ನೀಡಿದೆ.
ಅಲ್ಲದೇ ಪೋಸ್ಟ್ಪೇಯ್ಡ್ ಗ್ರಾಹಕರ ಬಿಲ್ ಪಾವತಿಯ ಅವಧಿಯನ್ನು ವಿಸ್ತರಿಸಿದೆ.
ಒಟ್ಟಿನಲ್ಲಿ ಮಳೆಯಿಂದಾಗಿ ತೀವ್ರ ಸಂಕಷ್ಟಕ್ಕೆ ಒಳಗಾದ ಚೆನ್ನೈ ಜನತೆ ಇತರರರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುವಂತೆ ಏರ್ಟೆಲ್ ನೆರವಿನ ಹಸ್ತ ಚಾಚಿದ್ದು ಪ್ರಶಂಸೆಗೆ ಪಾತ್ರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.