ನವದೆಹಲಿ: ಭಾರತದ ಆಶೋಕ ಚಕ್ರವರ್ತಿಯ ಸಾರನಾಥ್ ಸಿಂಹ ಚಿಹ್ನೆಯನ್ನು ತನ್ನ ರಾಷ್ಟ್ರೀಯ ಚಿಹ್ನೆಯನ್ನಾಗಿ ಸ್ವೀಕರಿಸಿ ಬರೋಬ್ಬರಿ 65 ವರ್ಷಗಳೇ ಸಂದಿವೆ. ಆದರೂ ರಾಷ್ಟ್ರಪತಿ ಭವನದ ಗೇಟ್ನಲ್ಲಿ ಮಾತ್ರ ಈ ಚಿಹ್ನೆ ಸ್ಥಾನವನ್ನು ಪಡೆದುಕೊಂಡಿರಲಿಲ್ಲ. ಆದರೆ ಇದೀಗ ಕೊನೆಗೂ ರಾಷ್ಟ್ರಪತಿ ಭವನದ ದ್ವಾರದಲ್ಲಿ ಅಶೋಕ ಚಿಹ್ನೆಯನ್ನು ಅಳವಡಿಸಲಾಗಿದೆ.
ಸ್ವಾತಂತ್ರ್ಯ ಸಿಕ್ಕ ತಕ್ಷಣವೇ ಈ ಗೇಟ್ ನಲ್ಲಿ ಬ್ರಿಟಿಷ್ ಕಿರೀಟವನ್ನು ತೆಗೆಯಲಾಗಿತ್ತು. ಅಲ್ಲಿಂದ ಈವರೆಗೂ ಈ ಜಾಗ ಖಾಲಿಯಾಗಿಯೇ ಇತ್ತು. ಇದೀಗ ರಾಷ್ಟ್ರಪತಿ ಭವನ 42 ಆಫ್ರಿಕನ್ ರಾಷ್ಟ್ರಗಳ ನಾಯಕರುಗಳಿಗೆ ಆತಿಥ್ಯ ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಖಾಲಿಯಾಗಿ ಉಳಿದಿದ್ದ ಜಾಗದಲ್ಲಿ ಆಶೋಕ ಚಿಹ್ನೆಯನ್ನು ಅಳವಡಿಸಿ ಅದಕ್ಕೊಂದು ಮೆರುಗು ನೀಡಲಾಗಿದೆ.
42 ಆಫ್ರಿಕನ್ ದೇಶಗಳ 54 ಪ್ರಮುಖ ನಾಯಕರಿಗೆ ರಾಷ್ಟ್ರಪತಿ ಭವನದಲ್ಲಿ ಅತಿಥಿ ಸತ್ಕಾರ ಮಾಡಲಾಗುತ್ತಿದೆ, ಪ್ರಧಾನಿ, ಸಚಿವರು ಸೇರಿದಂತೆ ಅನೇಕ ಗಣ್ಯರು ಇದರಲ್ಲಿ ಭಾಗವಹಿಸಲಿದ್ದಾರೆ. ಇದು ರಾಷ್ಟ್ರಪತಿ ಭವನ ಆಯೋಜನೆ ಮಾಡುತ್ತಿರುವ ಅತೀ ದೊಡ್ಡ ಸಮಾರಂಭವಾಗಿದೆ.
ಹೀಗಾಗಿ ರಾಷ್ಟ್ರಪತಿ ಭವನದಲ್ಲಿ ಶಿಲ್ಪಕಲೆ, ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡಲಾಗಿದೆ, ಮುಘಲ್ ಗಾರ್ಡನ್ ಸೇರಿದಂತೆ ಇಡೀ ಆವರಣಕ್ಕೆ ಗೋಲ್ಡನ್ ಬಣ್ಣದ ಬೆಳಕು ನೀಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.