ಬರಹಗಾರರ ಹತ್ಯೆ, ದಲಿತರ ಮೇಲಿನ ಹಲ್ಲೆ ಹೀಗೆ ಎಲ್ಲದಕ್ಕೂ ಹಿಂದೂ ಧರ್ಮವನ್ನೇ ಹೊಣೆ ಮಾಡಲಾಗುತ್ತಿದೆ. ಆದರೆ ಹಿಂದೂ ಧರ್ಮಗ್ರಂಥಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರುವ ಮಣಿ ರಾವ್ ಎಂಬ ಬರಹಗಾರ್ತಿ ಹಿಂದೂ ಧರ್ಮವೆಂದರೆ ’ಪ್ರೀತಿ ಮತ್ತು ಒಗ್ಗಟ್ಟು’ ಎಂದು ಪ್ರತಿಪಾದಿಸಿದ್ದಾರೆ.
ಇತ್ತೀಚಿಗಷ್ಟೇ ‘ಭಗವದ್ಗೀತಾ’ ಎಂಬ ತನ್ನ ಪುಸ್ತಕವನ್ನು ಬಿಡುಗಡೆಗೊಳಿಸಿರುವ ಅವರು, ಹಿಂದೂ ಧರ್ಮ ಎಂಬುದು ಪ್ರೀತಿ ಮತ್ತು ಏಕತೆಯ ಸಾರ ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೇ ಅಸಹಿಷ್ಣುತೆಯನ್ನು ಕೇವಲ ಬರಹಗಾರರು ಮಾತ್ರವಲ್ಲ ಜನಸಾಮಾನ್ಯರೂ ವಿರೋಧಿಸಬೇಕು ಎಂದಿದ್ದಾರೆ.
ಸಹಿಷ್ಣುತೆ ನಮ್ಮ ಸಮಾಜದಲ್ಲಿ ಕಡಿಮೆಯಾಗಿದೆ ಎಂಬುದು ನಿಜ. ಅದು ಸಿದ್ಧಾಂತಗಳಿಂದ ಮತ್ತು ಧರ್ಮದ ತಪ್ಪು ತಿಳುವಳಿಕೆಯಿಂದ ಆಗಿದೆ. ಹಿಂದೂ ಧರ್ಮದಲ್ಲಿ ನಂಬಿಕೆಯಿಟ್ಟವರು ಇಂತಹ ಅಪಾಯಕಾರಿ ಸಿದ್ಧಾಂತದ ವಿರುದ್ಧ ಧ್ವನಿಯೆತ್ತಬೇಕು ಎಂದು ಅವರು ಕರೆ ನೀಡಿದ್ದಾರೆ.
ಗೋವು, ಆನೆ, ನಾಯಿ, ಕೆಟ್ಟ ಮನುಷ್ಯ ಹೀಗೆ ಎಲ್ಲದರಲ್ಲೂ ಪಂಡಿತರು ಏಕತೆಯ ಭಾವವನ್ನು ನೋಡುತ್ತಾರೆ. ಗೀತೆಯೂ ಸಮಾಜದ ಸಾಮರಸ್ಯವನ್ನು ಪ್ರತಿಪಾದಿಸುತ್ತದೆ ಎಂದಿದ್ದಾರೆ.
ಭಗವದ್ಗೀತೆ ಹೆಣ್ಣುಮಕ್ಕಳನ್ನು ಕೀಳಾಗಿ ಕಾಣುವುದಿಲ್ಲ, ಅದರಲ್ಲೂ ಮಹಿಳಾವಾದವಿದೆ ಎಂಬುದು ಮಣಿಯವರ ಅಭಿಪ್ರಾಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.