ಬೈಂದೂರು : ಬೈಂದೂರು ವಿಧಾನ ಸಭಾ ಕ್ಷೇತ್ರದ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಉಪ್ಪುಂದದ ” ಕಾರ್ಯಕರ್ತ ” ಶಾಸಕರ ಕಚೇರಿಯಲ್ಲಿ ವಿವಿಧ ಸಂಸ್ಥೆಗಳ ವಿವಿಧ ಉದ್ಯೋಗಗಳಿಗೆ J.O.B (Job Opportunities for Byndoor youths ) ನಡಿ ನೇರ ನೇಮಕಾತಿಯ ಸಂದರ್ಶನ ಕಾರ್ಯಕ್ರಮವನ್ನು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆಯವರು ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕರು, ಸಮೃದ್ಧ ಬೈಂದೂರು ಕಲ್ಪನೆಯಡಿ ಬೈಂದೂರಿನಲ್ಲಿ ವಿದ್ಯಾಭ್ಯಾಸ ಪಡೆದವರು ಉದ್ಯೋಗಕ್ಕಾಗಿ ಶಾಸಕರ ಕಚೇರಿಯನ್ನು ಸಂಪರ್ಕಿಸಿದ ಯುವ ಸಮೂಹವನ್ನು ಗಮನದಲ್ಲಿಟ್ಟುಕೊಂಡು ಅವರಿಗೆಲ್ಲರಿಗೂ ಉದ್ಯೋಗಾವಕಾಶವನ್ನು ಪಡೆಯಲು ಈಗಾಗಲೇ ಉದ್ಯೋಗ ಮೇಳಗಳ ಆಯೋಜನೆ ಆಗಿದೆ. ಅಲ್ಲದೇ ಬೇರೆ ಬೇರೆ ಭಾಗಗಳಲ್ಲಿ ನಡೆದ ಉದ್ಯೋಗ ಮೇಳಗಳಿಗೆ ಭಾಗವಹಿಸುವ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದೇವೆ ಎಂದರು.
ಕಳೆದ 2 ವರ್ಷಗಳಲ್ಲಿ ಸರಿ ಸುಮಾರು 600 ಉದ್ಯೋಗಾಕಾಂಕ್ಷಿ ಯುವಕ ಯುವತಿಯರಿಗೆ ಉದ್ಯೋಗ ದೊರಕಿಸುವಲ್ಲಿ ಸಫಲತೆ ದೊರೆತಿದೆ. ಅದರ ಮುಂದುವರಿದ ಭಾಗವಾಗಿ ವಿವಿಧ ಉದ್ಯೋಗದಾತ ಸಂಸ್ಥೆ ಗಳನ್ನು ಹಾಗೂ ಉದ್ಯೋಗಾಕಾಂಕ್ಷಿಗಳನ್ನು ಸಂಪರ್ಕಿಸಿ ತಿಂಗಳಿಗೊಮ್ಮೆ ಶಾಸಕರ ಕಚೇರಿಯಲ್ಲಿ ಸಂದರ್ಶನ ವ್ಯವಸ್ಥೆ ಕಲ್ಪಿಸಿ ಆಸಕ್ತರಿಗೆ ತಮ್ಮಿಷ್ಟದ ಉದ್ಯೋಗ ವನ್ನು ಆಯ್ಕೆ ಮಾಡಿ ಕೊಳ್ಳಲು JOB ( Job Opportunities for Byndoor youths)ಎನ್ನುವ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಸದರಿ ಕಾರ್ಯಕ್ರಮ ನಿಯಮಿತವಾಗಿ ನಿರಂತರ ವಾಗಿ ನಡೆಯುತ್ತಿದ್ದು ಇದರ ಸದುಪಯೋಗವನ್ನು ಬೈಂದೂರಿನ ಯುವ ಜನತೆ ಪಡೆದು ಕೊಳ್ಳಬೇಕೆಂದು ಬೈಂದೂರು ಶಾಸಕರು ಮನವಿ ಮಾಡಿದ್ದಾರೆ.
ದಿನಾಂಕ : 28-09-2025 ರಂದು ಉತ್ಪಾದನ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಉದ್ಯೋಗದಾತ ಸಂಸ್ಥೆಗಳು ನಡೆಸಿದ ವೃತ್ತಿ ಸಂದರ್ಶನಕ್ಕೆ ಸುಮಾರು 42 ಉದ್ಯೋಗ ಆಸಕ್ತರು ಭಾಗವಹಿಸಿದ್ದು ಅದರ ಪೈಕಿ 38 ಯುವಕ ಯುವತಿಯರು ಉದ್ಯೋಗಾವಕಾಶ ಪಡೆಯುವಲ್ಲಿ ಸಫಲರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.