ಜೈಪುರ: ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯ ಅನುಪ್ಗಢ ಪಟ್ಟಣದಲ್ಲಿ ಯುವಕನೊಬ್ಬ ಬಲವಂತವಾಗಿ ಮತಾಂತರಗೊಂಡಿರುವ ಬಗ್ಗೆ ಪೊಲೀಸ್ ದೂರು ನೀಡಿದ ನಂತರ ಬೃಹತ್ ಕ್ರೈಸ್ತ ಮತಾಂತರ ಜಾಲವೊಂದು ಬೆಳಕಿಗೆ ಬಂದಿದೆ.
ಈ ಪ್ರಕರಣ ಸೆಪ್ಟೆಂಬರ್ 16 ರಂದು ಅನುಪ್ಗಢ ಪೊಲೀಸ್ ಠಾಣೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 14 ರಲ್ಲಿ ಬೆಳಕಿಗೆ ಬಂದಿದೆ.
ಎಸ್ಎಚ್ಒ ಈಶ್ವರ್ ಜಾಂಗಿಡ್ ಅವರ ಪ್ರಕಾರ, ದೂರುದಾರ ಸಂದೀಪ್ (23), 24 ಎಪಿಡಿ ಗ್ರಾಮದ ನಿವಾಸಿ, ಇಚ್ಛೆಗೆ ವಿರುದ್ಧವಾಗಿ ನನಗೆ ಆಮಿಷವೊಡ್ಡಿ ಮತಾಂತರಗೊಳಿಸಲಾಗಿದೆ ಎಂದು ಆರೋಪಿಸಿದ್ದಾನೆ. ಅವನು ಆರ್ಯನ್, ವಿನೋದ್ ಮತ್ತು ಪೌಲಸ್ ಬಾರ್ಜೊ ಎಂಬ ಮೂವರು ವ್ಯಕ್ತಿಗಳನ್ನು ಪ್ರಮುಖ ಆರೋಪಿಗಳೆಂದು ಹೆಸರಿಸಿದ್ದಾನೆ.
“ಸುಮಾರು ಒಂದು ತಿಂಗಳ ಹಿಂದೆ, ಅನುಪ್ಗಢ ರೈಲ್ವೆ ನಿಲ್ದಾಣದ ಬಳಿಯ ಬೈಕ್ ಬಿಡಿಭಾಗಗಳ ಅಂಗಡಿಗೆ ಭೇಟಿ ನೀಡಿದೆ. ಆ ಅಂಗಡಿಯನ್ನು ಆರ್ಯನ್ ಮತ್ತು ಅವನ ತಂದೆ ವಿನೋದ್ ನಡೆಸುತ್ತಿದ್ದರು, ಅವರ ಪರಿಚಯ ನನಗಿತ್ತು. ಮಾತುಕತೆ ವೇಳೆ ವೈವಾಹಿಕ ಸ್ಥಿತಿಯ ಬಗ್ಗೆ ವಿಚಾರಿಸಿದರು. ನಾನು ಅವಿವಾಹಿತ ಎಂದು ಹೇಳಿದಾಗ, ಆರ್ಯನ್ ಮತ್ತು ವಿನೋದ್ ಅವನನ್ನು ಫ್ರೆಂಡ್ಸ್ ಮಿಷನರಿ ಪ್ರಾರ್ಥನಾ ಬ್ಯಾಂಡ್ (FMPB) ನ ಸ್ಥಳೀಯ ಕಾರ್ಯಕರ್ತ ಪೌಲಸ್ ಬಾರ್ಜೊಗೆ ಪರಿಚಯಿಸಿದರು. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ “ಭಗವಂತ ಸಂತೋಷಪಡುತ್ತಾನೆ” ಮತ್ತು ಶೀಘ್ರದಲ್ಲೇ ಮದುವೆಯಾಗುತ್ತದೆ ಎಂದು ಬಾರ್ಜೋ ನನಗೆ ಭರವಸೆ ನೀಡಿದರು” ಎಂದು ಸಂದೀಪ್ ಹೇಳಿಕೊಂಡಿದ್ದಾನೆ.
ನಂತರ, ಆರ್ಯನ್, ವಿನೋದ್ ಮತ್ತು ಬಾರ್ಜೋ ಪ್ರೇಮ್ ನಗರದ ಕಾಲುವೆಯ ಬಳಿಗೆ ಕರೆದೊಯ್ದರು, ಅಲ್ಲಿ ನೀರಿನಲ್ಲಿ ಮತಾಂತರ ಆಚರಣೆಗಳನ್ನು ನಡೆಲಾಯಿತು ಎಂದು ದೂರಿದ್ದಾನೆ.
ಮತಾಂತರದ ನಂತರ, ಮೂವರು ನನಗೆ ಕಿರುಕುಳ ನೀಡಲು ಮತ್ತು ಹೆಚ್ಚಿನ ಹಿಂದೂಗಳನ್ನು ಹಿಂದೂ ಧರ್ಮಕ್ಕೆ ಕರೆತರುವಂತೆ ಒತ್ತಡ ಹೇರಲು ಪ್ರಾರಂಭಿಸಿದರು ಎಂದು ಸಂದೀಪ್ ಹೇಳಿದ್ದಾನೆ. ಇದರಿಂದ ವಿಚಲಿತನಾಗಿ ಪೊಲೀಸರನ್ನು ಸಂಪರ್ಕಿಸಿದ್ದೇನೆ ಎಂದಿದ್ದಾನೆ.
ದೂರಿನ ಆಧಾರದ ಮೇಲೆ, ಪೊಲೀಸರು ಜಾರ್ಖಂಡ್ನ ಕಟಿಂಗ್ಗೆಲ್ ಗ್ರಾಮದ 47 ವರ್ಷದ ಪೌಲಸ್ ಬಾರ್ಜೊ ಅನ್ನು ಬಂಧಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಬಾರ್ಜೊ ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದು,. FMPB ಮಾರ್ಗದರ್ಶನದಲ್ಲಿ 11 ವರ್ಷಗಳಲ್ಲಿ 454 ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಿರುವುದಾಗಿ ಒಪ್ಪಿಕೊಂಡಿದ್ದಾನೆ.
1995 ರಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವ ಮೊದಲು ಬಾರ್ಜೋ ಸ್ವತಃ ಹಿಂದೂ ಆಗಿದ್ದ. ಅವn ಅಣ್ಣ ಕೂಡ ಮೊದಲೇ ಮತಾಂತರಗೊಂಡಿದ್ರು. 2003 ರಲ್ಲಿ, ಬಾರ್ಜೋ ಚೆನ್ನೈನಲ್ಲಿರುವ ಎಫ್ಎಂಪಿಬಿ ಪ್ರಧಾನ ಕಚೇರಿಯನ್ನು ಸೇರಿಕೊಂಡ ಮತ್ತು ಝಾನ್ಸಿಯಲ್ಲಿ ಒಂದು ವರ್ಷದ ತರಬೇತಿಯನ್ನು ಪಡೆದ. 2004 ರ ಹೊತ್ತಿಗೆ, ಅವನನ್ನು ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದಲ್ಲಿ ಸಕ್ರಿಯವಾಗಿ ನಿಯೋಜಿಸಲಾಯಿತು, ಅಲ್ಲಿ ಅವನು ಮತಾಂತರ ಚಟುವಟಿಕೆಗಳನ್ನು ನಡೆಸುತ್ತಿದ್ದ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.