ನವದೆಹಲಿ: ಹೊಸ ಸಂಸತ್ತಿನ ಕಟ್ಟಡದಲ್ಲಿ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವಿಯ ರಥಗಳಿಂದ ತೆಗೆದ ಮೂರು ಪವಿತ್ರ ಚಕ್ರಗಳನ್ನು ಸ್ಥಾಪಿಸುವ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಶ್ರೀ ಜಗನ್ನಾಥ ದೇವಾಲಯ ಆಡಳಿತ (SJTA) ಪ್ರಸ್ತಾವನೆಯ ನಂತರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಅನುಮೋದಿಸಿದ ಈ ಕ್ರಮವು, “ಪ್ರಜಾಪ್ರಭುತ್ವದ ದೇವಾಲಯ”ವನ್ನು ಒಡಿಶಾದ ಶತಮಾನಗಳಷ್ಟು ಹಳೆಯದಾದ ಜಗನ್ನಾಥ ಸಂಸ್ಕೃತಿಯೊಂದಿಗೆ ಸಾಂಕೇತಿಕವಾಗಿ ಸಂಪರ್ಕಿಸುವ ಗುರಿಯನ್ನು ಹೊಂದಿದೆ.
ಸಂಸತ್ತಿನ ಆವರಣದೊಳಗೆ ನಂದಿಘೋಷ (ಜಗನ್ನಾಥನ ರಥ), ದೇಬದಲಾನ (ದೇವತೆ ಸುಭದ್ರಾ ರಥ) ಮತ್ತು ದರ್ಪದಲಾನ (ಭಗವಾನ್ ಬಾಲಭದ್ರನ ರಥ) ದಿಂದ ತಲಾ ಒಂದು ಚಕ್ರವನ್ನು ಇಡುವ ನಿರ್ಧಾರ ಮಾಡಲಾಗಿದೆ.
“ಈ ಕ್ರಮ ಒಡಿಶಾದ ಜಗನ್ನಾಥ ಸಂಪ್ರದಾಯಗಳು ಮತ್ತು ದೇಶದ ಅತ್ಯುನ್ನತ ಪ್ರಜಾಪ್ರಭುತ್ವ ಸಂಸ್ಥೆಯ ನಡುವಿನ ಸಾಂಸ್ಕೃತಿಕ ಬಂಧವನ್ನು ಬಲಪಡಿಸುತ್ತದೆ .ಇದು ಸಾಂಸ್ಕೃತಿಕ ಹೆಮ್ಮೆ ಮತ್ತು ರಾಷ್ಟ್ರೀಯ ಗುರುತನ್ನು ಒತ್ತಿಹೇಳುವ ಪ್ರಮುಖ ಕ್ಷಣವಾಗಿದೆ” ಎಂದು ಒಡಿಶಾ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಥ ಚಕ್ರಗಳನ್ನು ಈಗಾಗಲೇ ಒಡಿಶಾ ವಿಧಾನಸಭೆ ಆವರಣ ಮತ್ತು ಭುವನೇಶ್ವರದ ರಾಜ್ಯ ಅತಿಥಿ ಗೃಹದಲ್ಲಿ ಸ್ಥಾಪಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.