ನವದೆಹಲಿ: ಜೂನ್ 26, 2025 ರ ಹೊತ್ತಿಗೆ, ಭಾರತ್ನೆಟ್ ಯೋಜನೆಯಡಿಯಲ್ಲಿ ಒಟ್ಟು 6.55 ಲಕ್ಷ ಹಳ್ಳಿಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕವನ್ನು ನೀಡಬೇಕಾಗಿತ್ತು ಆದರೆ 4.53 ಲಕ್ಷ ಹಳ್ಳಿಗಳು ಇನ್ನೂ ಈ ವ್ಯಾಪ್ತಿಗೆ ಬಂದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಡಿದ ಆರೋಪಕ್ಕೆ ಕೇಂದ್ರ ದೂರಸಂಪರ್ಕ ಸಚಿವ ಜ್ಯೋತರಾದಿತ್ಯ ಸಿಂಧಿಯಾ ತಿರುಗೇಟು ನೀಡಿದ್ದಾರೆ.
ಸಿಂಧಿಯಾ ಅವರು 18 ವರ್ಷಗಳ ಬಿಎಸ್ಎನ್ಎಲ್ನ ಸತತ ಲಾಭದಿಂದ ಹಿಡಿದು 2 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯತ್ಗಳನ್ನು ಬ್ರಾಡ್ಬ್ಯಾಂಡ್ನೊಂದಿಗೆ ಸಂಪರ್ಕಿಸುವವರೆಗಿನ ದತ್ತಾಂಶಗಳ ಸರಮಾಲೆಯನ್ನು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಬಿಡುಗಡೆ ಮಾಡಿ ಖರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ.
ಅಲ್ಲದೇ ಯುಪಿಎ ಆಡಳಿತಕ್ಕೆ ಸಂಬಂಧಿಸಿದ ದೂರಸಂಪರ್ಕ ಹಗರಣಗಳ ಮಾಹಿತಿ ಪಡೆಯಲು ವೆಬ್ ಸರ್ಚ್ ಮಾಡಿ ಎಂದು ಖರ್ಗೆಗೆ ಸಿಂಧಿಯಾ ಸಲಹೆ ನೀಡಿದ್ದಾರೆ.
“ಖರ್ಗೆ ಅವರೇ, ನಾನು ಒಂದು ಸರಳ ಸಲಹೆಯನ್ನು ನೀಡುತ್ತೇನೆ.: “ಭಾರತದಲ್ಲಿ ಟೆಲಿಕಾಂ ಹಗರಣಗಳು” ಎಂದು ವೆಬ್ ಹುಡುಕಾಟ ನಡೆಸಿಸಿ. ಆಗ ನೀವು ಕಾಂಗ್ರೆಸ್/ಯುಪಿಎ ನೇತೃತ್ವದ ಕ್ರೋನಿ ಕ್ಯಾಪಿಟಲಿಸಂನ ಭ್ರಷ್ಟಾಚಾರದ ಪಟ್ಟಿಯನ್ನೇ ಪಡೆಯುತ್ತೀರಿ!” ಎಂದಿದ್ದಾರೆ.
ಪ್ರಸ್ತುತ ಟೆಲಿಕಾಂ, 5G ಮತ್ತು ಉಪಗ್ರಹ ಸಂಪರ್ಕದಲ್ಲಿ ಜಗತ್ತು ಭಾರತವನ್ನು ಜಾಗತಿಕ ನಾಯಕನಾಗಿ ನೋಡಲಾಗುತ್ತಿದೆ. ಪ್ರಧಾನಿ ಮೋದಿ ಸರ್ಕಾರವು ಸ್ವಜನ ಪಕ್ಷಪಾತ ಮಾಡುವ ಮೂಲಕ ಅಲ್ಲ, ಬದಲಾಗಿ ಸುಧಾರಣೆಗಳನ್ನು ಮಾಡುವ ಮೂಲಕ ಮತ್ತು ಹಳೆಯ ಪಕ್ಷದ ಅವ್ಯವಸ್ಥೆಯನ್ನು ತೊಡೆದುಹಾಕುವ ಮೂಲಕ ಅದನ್ನು ಸಾಧ್ಯವಾಗಿಸಿದೆ ಎಂದು ಸಚಿವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.