ನವದೆಹಲಿ: ಆಪರೇಷನ್ ಸಿಂಧೂರ್ ನಂತರದಲ್ಲಿ ಭಾರತದ ಭಯೋತ್ಪಾದನಾ ವಿರೋಧಿ ರಾಜತಾಂತ್ರಿಕ ಸಂಪರ್ಕವನ್ನು ಅಮೆರಿಕ, ಬ್ರೆಜಿಲ್ ಮತ್ತು ಇತರ ಮೂರು ರಾಷ್ಟ್ರಗಳಿಗೆ ಮುನ್ನಡೆಸಿದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು, ಪ್ರಧಾನಿ ನರೇಂದ್ರ ಮೋದಿಯವರ ಶಕ್ತಿ, ಚೈತನ್ಯ ಮತ್ತು ಇತರ ದೇಶಗಳೊಂದಿಗೆ ಅವರ ತೊಡಗಿಸಿಕೊಳ್ಳುವ ಇಚ್ಛಾಶಕ್ತಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ತರೂರ್ ಅವರು ತಾವು ನೇತೃತ್ವ ವಹಿಸಿದ ತಂಡವು ಅಮೆರಿಕ, ಪನಾಮ, ಗಯಾನ, ಬ್ರೆಜಿಲ್, ಮತ್ತು ಕೊಲಂಬಿಯಾದಂತಹ ರಾಷ್ಟ್ರಗಳಿಗೆ ಭೇಟಿ ನೀಡಿ, ಭಾರತದ ಶೂನ್ಯ-ಸಹಿಷ್ಣುತೆಯ ಭಯೋತ್ಪಾದಕ ನೀತಿಯನ್ನು ವಿವರಿಸಿತ್ತು.
ಅಲ್ಲದೇ ಜಾಗತಿಕ ವೇದಿಕೆಯಲ್ಲಿ ಮೋದಿ ಅವರು ಭಾರತಕ್ಕೆ ಒಂದು ಪ್ರಮುಖ ಆಸ್ತಿ ಎಂದಿದ್ದಾರೆ.
ಪತ್ರಿಕೆಯೊಂದಕ್ಕೆ ಲೇಖನ ಬರೆದಿರುವ ಅವರು, ಏಳು ಸರ್ವ ಪಕ್ಷ ಸಂಸದ ನಿಯೋಗಗಳು ಅಮೆರಿಕ, ಯುರೋಪಿಯನ್ ಒಕ್ಕೂಟ ಮತ್ತು ಸದಸ್ಯ ರಾಷ್ಟ್ರಗಳು, ಸೌದಿ ಅರೇಬಿಯಾ ಮತ್ತು ರಷ್ಯಾ ಸೇರಿದಂತೆ 32 ದೇಶಗಳಿಗೆ ಭೇಟಿ ನೀಡಿದ್ದು ರಾಷ್ಟ್ರೀಯ ಸಂಕಲ್ಪ ಮತ್ತು ಪರಿಣಾಮಕಾರಿ ಸಂವಹನದ ಕ್ಷಣವಾಗಿದೆ. ಭಾರತವು ಒಗ್ಗಟ್ಟಾದಾಗ, ಸ್ಪಷ್ಟತೆ ಮತ್ತು ದೃಢನಿಶ್ಚಯದಿಂದ ತನ್ನ ಧ್ವನಿಯನ್ನು ಪ್ರದರ್ಶಿಸಬಹುದು ಎಂದು ದೃಢಪಡಿಸಿದೆ” ಎಂದು ಹೇಳಿದರು.
ಈ ರಾಜತಾಂತ್ರಿಕ ಯಶಸ್ಸು ಭಾರತದ “ಮೂರು Tಗಳು” (Talent, Technology, Tradition) ಮೇಲೆ ಆಧಾರಿತವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
“ನಮ್ಮ ಗಡಿಯಾಚೆಯಿಂದ ಬರುವ ಬೆದರಿಕೆಯ ತೀವ್ರತೆಯನ್ನು ನಾವು ನಿರಂತರವಾಗಿ ಎತ್ತಿ ತೋರಿಸಿದ್ದೇವೆ, ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡಲು ಜಾಗತಿಕ ಒಮ್ಮತವನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದೇವೆ. ಸಂಪರ್ಕವು ಯಶಸ್ವಿಯಾಗಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.