ನವದೆಹಲಿ: ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಮಧ್ಯಪ್ರದೇಶದ ಚಿತ್ರಕೂಟದಲ್ಲಿರುವ ಆಶ್ರಮದಲ್ಲಿ ಆಧ್ಯಾತ್ಮಿಕ ನಾಯಕ ಜಗದ್ಗುರು ರಾಮಭದ್ರಾಚಾರ್ಯರಿಂದ ಆಶೀರ್ವಾದ ಪಡೆದರು. ಈ ವೇಳೆ ಪಾಕಿಸ್ಥಾನ ಆಕ್ರಮಿತ ಕಾಶ್ಮೀರ ಅನ್ನು ಮರಳಿ ಪಡೆಯುವಂತೆ ಜಗದ್ಗುರುಗಳು ಸೇನಾ ಮುಖ್ಯಸ್ಥರಿಗೆ ಮನವಿ ಮಾಡಿದರು.
ಬುಧವಾರ ಜನರಲ್ ದ್ವಿವೇದಿ ಅವರ ಆಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಸೀತೆಯನ್ನು ರಕ್ಷಿಸಲು ಹನುಮಂತನು ಲಂಕೆಗೆ ಹೋಗುವ ಮೊದಲು ನೀಡಲಾದ ರಾಮ ಮಂತ್ರದೊಂದಿಗೆ ದೀಕ್ಷೆ ಅವರಿಗೆ ನೀಡಲಾಯಿತು, ಸ್ವಾಮಿಗಳ ಜೊತೆಗೆ ಅವರು ಆಧ್ಯಾತ್ಮಿಕ ಚರ್ಚೆಯನ್ನೂ ನಡೆಸಿದರು ಮತ್ತು ಸೇನಾ ಮುಖ್ಯಸ್ಥರು ಆಶ್ರಮದಲ್ಲಿ ಸಂತರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ದೀಕ್ಷೆಯು ಗುರು-ಶಿಷ್ಯ ಸಂಬಂಧವನ್ನು ಸ್ಥಾಪಿಸುವ ಮತ್ತು ಲೌಕಿಕ ಮಾರ್ಗದತ್ತ ಸಾಗಲು ವ್ಯಕ್ತಿಯನ್ನು ಸಿದ್ಧಪಡಿಸುವ ಆಧ್ಯಾತ್ಮಿಕ ಪ್ರಕ್ರಿಯೆಯಾಗಿದೆ.
ಈ ವೇಳೆ ರಾಮಭದ್ರಾಚಾರ್ಯರು ಜನರಲ್ ದ್ವಿವೇದಿ ಅವರಿಗೆ POk ಅನ್ನು ಗುರು ದಕ್ಷಿಣೆ ನೀಡುವಂತೆ ಕೋರಿದರು.
ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ 26 ನಾಗರಿಕರ ಹತ್ಯೆಗೆ ಪ್ರತಿಕ್ರಿಯೆಯಾಗಿ ಭಾರತವು ಮೇ 7 ರಂದು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿದ ವಾರಗಳ ನಂತರ ಸ್ವಾಮೀಜಿಗಳು ಈ ಮನವಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.