ಅಮೃತಸರ: ಪಂಜಾಬ್ನ ಫಿರೋಜ್ಪುರ ಜಿಲ್ಲೆಯ ಮಾಮ್ಡೋಟ್ ಗ್ರಾಮದ 10 ವರ್ಷದ ಶ್ರವಣ್ ಸಿಂಗ್ ತೋರಿಸಿದ ಅಪ್ರತಿಮ ದೇಶಭಕ್ತಿಯ ಕಾರ್ಯಕ್ಕಾಗಿ ಭಾರತೀಯ ಸೇನೆಯಿಂದ ಆಪರೇಷನ್ ಸಿಂಧೂರ್ ಸಮಯದ ‘ಕಿರಿಯ ನಾಗರಿಕ ಯೋಧ’ ಎಂದು ಗುರುತಿಸಲ್ಪಟ್ಟಿದ್ದಾನೆ. ಕಾರ್ಯಾಚರಣೆಯ ಸದರ್ಭದಲಲಿ, ಶ್ರವಣ್ ನಿಸ್ವಾರ್ಥವಾಗಿ ಸೈನಿಕರಿಗೆ ನೀರು, ಚಹಾ, ಹಾಲು, ಲಸ್ಸಿ ಮತ್ತು ಐಸ್ ಒದಗಿಸಿ ಮಹತ್ಕಾರ್ಯ ಮಾಡಿದ್ದಾನೆ.
ಭಾರತೀಯ ಸೇನೆಯ ಬಗೆಗಿನ ಅವರ ಸಮರ್ಪಣೆ ಮತ್ತು ಸೈನಿಕರೊಂದಿಗಿನ ಬಾಂಧವ್ಯಕ್ಕೆ 7 ಪದಾತಿ ದಳದ GOC ಮೇಜರ್ ಜನರಲ್ ರಂಜೀತ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆತನಿಗೆ ವಿಶೇಷ ಸನ್ಮಾನವನ್ನು ಮಾಡಿದ್ದಾರೆ.
ಶ್ರವಣ್ ಅವರ ತಂದೆ ಸೋನಾ ಸಿಂಗ್ ಮಾತನಾಡಿ, “ಸೈನಿಕರು ನಮ್ಮ ಜಾಗದಲ್ಲಿ ನಿಯೋಜಿತರಾಗಿದ್ದ ವೇಳೆ ಮೊದಲ ದಿನದಿಂದಲೇ ನನ್ನ ಮಗ ಅವರಿಗೆ ಹಾಲು, ಲಸ್ಸಿ, ನೀರು ಮತ್ತು ಐಸ್ ತೆಗೆದುಕೊಂಡು ಹೋಗಲು ಪ್ರಾರಂಭಿಸಿದ. ಸೈನ್ಯಕ್ಕೆ ಸೇವೆ ಸಲ್ಲಿಸುವುದರಲ್ಲಿ ಅವನು ಸಂತೋಷವನ್ನು ಕಂಡುಕೊಂಡಿದ್ದರಿಂದ ನಾವು ಅವನನ್ನು ಎಂದಿಗೂ ತಡೆಯಲಿಲ್ಲ. ಅವನು ಯೋಧರನ್ನು ನಿಯಮಿತವಾಗಿ ಭೇಟಿ ಮಾಡುತ್ತಲೇ ಇದ್ದ. ಅವ ಕಾರ್ಯ ನಮಗೆ ಹೆಮ್ಮೆ ತಂದಿತು. ಈಗ ಅವನು ಸೈನಿಕನಾಗುವ ಕನಸು ಕಾಣುತ್ತಿದ್ದಾನೆ” ಎಂದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರವಣ್, ಸೇನಾ ಸಿಬ್ಬಂದಿಯನ್ನು ಭೇಟಿ ಮಾಡುವುದನ್ನು ಮತ್ತು ಅವರಿಗೆ ಉಪಾಹಾರಗಳನ್ನು ಒದಗಿಸುವುದನ್ನು ಆನಂದಿಸಿದೆ ಎಂದು ಹೇಳಿದ್ದಾನೆ. “ನಾನು ದೊಡ್ಡವನಾಗಿ ಸೈನಿಕನಾಗಲು ಬಯಸುತ್ತೇನೆ. ಅವರು ನನಗೆ ವಿಶೇಷ ಉಡುಗೊರೆ ನೀಡಿದರು, ವಿಶೇಷ ಊಟ ನೀಡಿ ಸತ್ಕರಿಸಿದರು ಮತ್ತು ಐಸ್ ಕ್ರೀಮ್ ಸಹ ನೀಡಿದರು. ಅದು ನನಗೆ ತುಂಬಾ ಸಂತೋಷ ತಂದಿತು” ಎಂದಿದ್ದಾನೆ.
#IndianArmy honours little boy Shravan Singh, who helped soldiers in Amritsar border by bringing water, milk, lassi, ice from his house during #operation_sindoor .#Sardar for a reason. Nation First! pic.twitter.com/1r686sFpYV
— Major Madhan Kumar 🇮🇳 (@major_madhan) May 28, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.