ನವದೆಹಲಿ: ಮಾಜಿ ಪ್ರಧಾನಿ ಎಪಿಜೆ ಅಬ್ದುಲ್ ಕಲಾಂ ಅವರ 84 ನೇ ಜನ್ಮದಿನದ ಅಂಗವಾಗಿ ಗುರುವಾರ ಪ್ರಧಾನಿ ನರೇಂದ್ರ ಮೋದಿಯವರು ಡಿಆರ್ಡಿಓ ಭವನದಲ್ಲಿ ಕಲಾಂ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಇದೇ ವೇಳೆ ನವದೆಹಲಿಯ ಡಿಆರ್ಡಿಓ ಭವನದಲ್ಲಿ ’ಎ ಸೆಲೆಬ್ರೇಷನ್ ಆಫ್ ಡಾ. ಕಲಾಮ್ಸ್ ಲೈಫ್’ ಎಂಬ ಫೋಟೋ ಪ್ರದರ್ಶನವನ್ನು ಅವರು ಉದ್ಘಾಟಿಸಿದರು.ಇದೇ ವೇಳೆ ಅವರ ಸ್ಮರಣಾರ್ಥ ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆಗೊಳಿಸಲಾಯಿತು.
ಈ ವೇಳೆ ಮಾತನಾಡಿದ ಮೋದಿ, ಕಲಾಂ ಅವರು ಮೊದಲು ರಾಷ್ಟ್ರ ರತ್ನ ಬಳಿಕ ರಾಷ್ಟ್ರಪತಿ. ಸವಾಲುಗಳನ್ನು ಮೆಟ್ಟಿ ನಿಲ್ಲುವ ಬಗ್ಗೆ ಸದಾ ಅವರು ಗಮನ ಹರಿಸುತ್ತಿದ್ದರು.
ಕ್ಷಿಪಣಿ ಮಾನವ ರಾಷ್ಟ್ರಪತಿ ಹುದ್ದೆಯಿಂದ ಕೆಳಗಿಳಿದ ತಕ್ಷಣದಿಂದ ಉಪನ್ಯಾಸ ಕಾಯಕದಲ್ಲಿ ತೊಡಗಿಕೊಂಡರು, ಬಲಿಷ್ಠ ಬದ್ಧತೆ ಇಲ್ಲದ ಹೊರತು ಇದು ಸಾಧ್ಯವಾಗುತ್ತಿರಲಿಲ್ಲ ಎಂದರು.
ಅಲ್ಲದೇ ರಾಮೇಶ್ವರಂನಲ್ಲಿ ಕಲಾಂ ಅವರ ಸ್ಮಾರಕವನ್ನು ನಿರ್ಮಿಸಲು ಸರ್ಕಾರ ಭೂ ಸ್ವಾಧೀನಗೊಳಿಸಲಾಗಿದೆ ಎಂದು ಅವರು ಘೋಷಿಸಿದರು.
ಜನರ ರಾಷ್ಟ್ರಪತಿಯೆಂದೇ ಕರೆಯಲ್ಪಡುತ್ತಿದ್ದ ಅಬ್ದುಲ್ ಕಲಾಂ ಅವರು ಜುಲೈನಲ್ಲಿ ಇಹಲೋಕ ತ್ಯಜಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.