ನವದೆಹಲಿ: ದೆಹಲಿಯ ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಸಚಿವ ಪರ್ವೇಶ್ ವರ್ಮಾ ಇಂದು ದೋಣಿ ಮೂಲಕ ಯಮುನಾ ನದಿಯನ್ನು ಪರಿಶೀಲಿಸಿದ್ದು, ಕಳೆದ 10 ದಿನಗಳಲ್ಲಿ ನದಿಯಿಂದ 1,300 ಟನ್ ಕಸವನ್ನು ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ.
ಯಮುನಾ ನದಿಯನ್ನು ಸ್ವಚ್ಛಗೊಳಿಸುವುದು ಇತ್ತೀಚೆಗಷ್ಟೇ ಮುಗಿದ ದೆಹಲಿ ವಿಧಾನಸಭಾ ಚುನಾವಣೆಯ ಸಂದರ್ಭ ಬಿಜೆಪಿ ನೀಡಿದ ಪ್ರಮುಖ ಭರವಸೆಗಳಲ್ಲಿ ಒಂದಾಗಿದೆ.
“2023 ರಲ್ಲಿ, ದೆಹಲಿಯು ಪ್ರವಾಹವನ್ನು ಎದುರಿಸಿತು. ಈ ಹಿಂದೆ, ಎಲ್ಲಾ ಪ್ರವಾಹ ಗೇಟ್ಗಳನ್ನು ಮುಚ್ಚಲಾಗಿತ್ತು, ಆದರೆ ಈಗ ಅವುಗಳನ್ನು ಸರಿಪಡಿಸಲಾಗಿದೆ ಮತ್ತು ಭವಿಷ್ಯದ ಪ್ರವಾಹವನ್ನು ತಡೆಗಟ್ಟಲು ಅವುಗಳನ್ನು ಮೇಲಕ್ಕೆತ್ತಲಾಗಿದೆ” ಎಂದು ವರ್ಮಾ ಹೇಳಿದ್ದಾರೆ.
“ಯಮುನಾ ನದಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಮತ್ತು ಪುನಃಸ್ಥಾಪಿಸುವುದು ನಮ್ಮ ದೊಡ್ಡ ಬದ್ಧತೆಯಾಗಿದೆ. ಈಗಿನಂತೆ, ಕಳೆದ 10 ದಿನಗಳಲ್ಲಿ 1,300 ಮೆಟ್ರಿಕ್ ಟನ್ ಕಸವನ್ನು ತೆಗೆದುಹಾಕಲಾಗಿದೆ. ದೆಹಲಿ ಅಭಿವೃದ್ಧಿ ಪ್ರಾಧಿಕಾರವು ನದಿಪಾತ್ರವನ್ನು ಪುನಃಸ್ಥಾಪಿಸುತ್ತದೆ ಮತ್ತು ಅತಿಕ್ರಮಣಗಳನ್ನು ತೆಗೆದುಹಾಕಲಾಗುತ್ತಿದೆ” ಎಂದು ಸಚಿವರು ಹೇಳಿದರು.
ನದಿಗೆ ತ್ಯಾಜ್ಯವನ್ನು ಬಿಡುವ 18 ಪ್ರಮುಖ ಚರಂಡಿಗಳಿಗೆ ಒಳಚರಂಡಿ ಸಂಸ್ಕರಣಾ ಘಟಕಗಳನ್ನು (ಎಸ್ಟಿಪಿ) ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.
“ದೂರುಗಳನ್ನು ಪರಿಹರಿಸಲಾಗುವುದು, ಹೊಸ ಎಸ್ಟಿಪಿಗಳನ್ನು ಸ್ಥಾಪಿಸಲಾಗುವುದು ಮತ್ತು ಅಸ್ತಿತ್ವದಲ್ಲಿರುವವುಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು. ಎಲ್ಲಾ ಎಸ್ಟಿಪಿಗಳನ್ನು ಎರಡು ವರ್ಷಗಳಲ್ಲಿ ಸ್ಥಾಪಿಸುವ ನಿರೀಕ್ಷೆಯಿದೆ” ಎಂದು ವರ್ಮಾ ಹೇಳಿದ್ದಾರೆ.
ಕಳೆದೊಂದು ದಶಕದಲ್ಲಿ ನದಿಯನ್ನು ಸ್ವಚ್ಛಗೊಳಿಸಲು ಯಾವುದೇ ಮಹತ್ವದ ಕೆಲಸ ಮಾಡಿಲ್ಲ ಎಂದು ಅವರು ಪ್ರತಿಪಾದಿಸಿದರು.
“ಯಮುನಾ ನದಿಗಾಗಿ ಕೆಲಸ ಮಾಡುವುದು ಹಿಂದಿನ ಸರ್ಕಾರಕ್ಕೆ ಎಂದಿಗೂ ಆದ್ಯತೆ ಆಗಿರಲಿಲ್ಲ. ಆದರೆ ಈಗ, ದೆಹಲಿ ಸರ್ಕಾರ ಮಾತ್ರವಲ್ಲದೆ PMO ಸ್ವತಃ ಯುಮನಾ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದೆ” ಎಂದು ವರ್ಮಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.