ನವದೆಹಲಿ: ಈಗ ರದ್ದುಗೊಂಡಿರುವ ದೆಹಲಿಯ ಮದ್ಯನೀತಿಯಿಂದಾಗಿ ದೆಹಲಿ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 2,002.68 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಸಿಎಜಿ ವರದಿ ಹೇಳಿದೆ.
ಇಂದು ವಿಧಾನಸಭೆಯಲ್ಲಿ ಕಂಟ್ರೋಲರ್ ಆಂಡ್ ಆಡಿಟರ್ ಜನರಲ್ (ಸಿಎಜಿ) ವರದಿಯನ್ನು ಮಂಡಿಸಲಾಗಿದ್ದು, ಎಎಪಿ ನೇತೃತ್ವದ ಹಿಂದಿನ ದೆಹಲಿ ಸರ್ಕಾರ ತೆಗೆದುಕೊಂಡ ತಪ್ಪು ನಿರ್ಧಾರಗಳು ಮತ್ತು ಲೋಪಗಳ ಸರಮಾಲೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಉಂಟಾದ ನಷ್ಟದ ಬಗ್ಗೆ ಮಾಹಿತಿ ಬಹಿರಂಗಪಡಿಸಿದೆ. ನವೆಂಬರ್ 2021 ರಲ್ಲಿ ಜಾರಿಗೆ ತಂದು ನಂತರ ರದ್ದುಗೊಳಿಸಲಾದ ಮದ್ಯ ನೀತಿಯು ದೆಹಲಿ ಆಡಳಿತಕ್ಕೆ 2,002.68 ಕೋಟಿ ರೂಪಾಯಿಗಳ ನಷ್ಟವನ್ನುಂಟುಮಾಡಿದೆ ಎಂದು ವರದಿ ಹೇಳಿದೆ. ಈ ಮದ್ಯ ನೀತಿಯ ಕಾರಣದಿಂದಲೇ ಸಿಎಂ ಆಗಿದ್ದ ಅರವಿಂದ್ ಕೇಜ್ರಿವಾಲ್ ಜೈಲುವಾಸ ಅನುಭವಿಸಿದ್ದರು.
ಮದ್ಯ ನೀತಿಯು ಹಿಂದಿನ ಎಎಪಿ ಸರ್ಕಾರದ ಅಧಃಪತನಕ್ಕೂ ಕಾರಣವಾಗಿತ್ತು. ಆಗಿನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಅದರ ಹಲವಾರು ನಾಯಕರು ಜೈಲಿಗೆ ಹೋಗುವಂತೆ ಮಾಡಿತ್ತು. ಈ ತಿಂಗಳ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಸೋಲಲು ಮತ್ತು 26 ವರ್ಷಗಳ ಅಂತರದ ನಂತರ ಬಿಜೆಪಿ ದೆಹಲಿಯಲ್ಲಿ ಸರ್ಕಾರ ರಚಿಸುವಲ್ಲಿ ಇದರ ಪಾತ್ರ ಬಹಳಷ್ಟಿದೆ.
ವಿಧಾನಸಭೆಯಲ್ಲಿ ಭಾರಿ ಕೋಲಾಹಲದ ನಡುವೆ ವರದಿಯನ್ನು ಮಂಡಿಸಲಾಗಿದೆ. ಈ ವೇಳೆ 15 ಎಎಪಿ ಶಾಸಕರನ್ನು ಅಮಾನತುಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.