ನವದೆಹಲಿ: ಮಹಾ ಕುಂಭ ಮತ್ತು ಪ್ರಯಾಗ್ರಾಜ್ಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ಹರಡಿದ 10 ಪ್ರಕರಣಗಳಲ್ಲಿ 101 ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಬುಧವಾರ ತಿಳಿಸಿದ್ದಾರೆ. ಬೃಹತ್ ಧಾರ್ಮಿಕ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಕಲಿ ಸುದ್ದಿ ಮತ್ತು ತಪ್ಪು ಮಾಹಿತಿಯನ್ನು ತಡೆಯಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರಶಾಂತ್ ಕುಮಾರ್ ಅವರ ಪ್ರಕಾರ, ದಾರಿತಪ್ಪಿಸುವ ವಿಷಯಗಳ ಹರಡುವಿಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಎದುರಿಸಲು ಸಮಗ್ರ ಸೈಬರ್ ಗಸ್ತು ತಂತ್ರವನ್ನು ಜಾರಿಗೆ ತರಲಾಗಿದೆ.
ಈ ಉಪಕ್ರಮದಡಿಯಲ್ಲಿ, ಉತ್ತರ ಪ್ರದೇಶ ಪೊಲೀಸರು ಮತ್ತು ತಜ್ಞ ಸಂಸ್ಥೆಗಳು ಮಹಾ ಕುಂಭಕ್ಕೆ ಸಂಬಂಧಿಸಿದ ನಕಲಿ ಪೋಸ್ಟ್ಗಳು, ವದಂತಿಗಳು ಮತ್ತು ಸೈಬರ್ ಅಪರಾಧಗಳಿಗಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿರಂತರವಾಗಿ ಟ್ರ್ಯಾಕ್ ಮಾಡುತ್ತಿವೆ.
ಬುಧವಾರ, ಕೆಲವು ಸೋಶಿಯಲ್ ಮೀಡಿಯಾ ಖಾತೆಗಳು ಪಾಕಿಸ್ಥಾನದ ಕರಕ್ ಜಿಲ್ಲೆಯ ವೀಡಿಯೊವನ್ನು ಪ್ರಯಾಗ್ರಾಜ್ನಲ್ಲಿ ನಡೆದ ಮಹಾ ಕುಂಭ ಕಾಲ್ತುಳಿತಕ್ಕೆ ಲಿಂಕ್ ಮಾಡಿ ಪೋಸ್ಟ್ ಮಾಡಿರುವುದು ಕಂಡುಬಂದಿದೆ. “ಯೇ ಪ್ರಯಾಗ್ರಾಜ್ ಹೈ” ಎಂಬ ಶೀರ್ಷಿಕೆಯ ಹಾಡನ್ನು ವೀಡಿಯೊದೊಂದಿಗೆ ಸೇರಿಸಲಾಗಿದೆ.
ಪರಿಶೀಲನೆಯ ನಂತರ, ಈ ದೃಶ್ಯಗಳು ಜನವರಿ 2025 ರಲ್ಲಿ ಪಾಕಿಸ್ತಾನದಲ್ಲಿ ನಡೆದ ರಸ್ತೆ ಅಪಘಾತದ್ದು ಎಂದು ದೃಢಗೊಂಡಿದೆ.
ಹೀಗಾಗಿ ಮಹಾ ಕುಂಭದ ಸಮಯದಲ್ಲಿ ಸಂಭವಿಸಿದ ಕಾಲ್ತುಳಿತ ಎಂದು ತಪ್ಪಾಗಿ ಬಿಂಬಿಸುವ ಮೂಲಕ ಭಯ ಹುಟ್ಟಿಸಲು ಮತ್ತು ಕುಂಭದ ಬಗ್ಗೆ ಅಪಖ್ಯಾತಿ ಮೂಡಿಸಲು ಪ್ರಯತ್ನಿಸಿದ 26 ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಕೊತ್ವಾಲಿ ಕುಂಭಮೇಳ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಮಹಾ ಕುಂಭ ಆರಂಭವಾದಾಗಿನಿಂದ, ತಪ್ಪು ಮಾಹಿತಿ ಹರಡಿದ್ದಕ್ಕಾಗಿ ಒಟ್ಟು 101 ವಿವಿಧ ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 13 ರಂದು, ಕುಂಭಮೇಳ ಪ್ರದೇಶದಲ್ಲಿ ನಡೆದ ಅಗ್ನಿಶಾಮಕ ಸುರಕ್ಷತಾ ಅಣಕು ಡ್ರಿಲ್ ಅನ್ನು ನಿಜವಾದ ಬೆಂಕಿ ಘಟನೆ ಎಂದು ತಪ್ಪಾಗಿ ಬಿಂಬಿಸಿದ ಎಕ್ಸ್ ಖಾತೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.