ಜೈಪುರ್: ಜೈಪುರದ ಜನ್ಪತ್ನಲ್ಲಿ ನಡೆದ ಸಮಾರಂಭವೊಂದರಲ್ಲಿ ಬರೋಬ್ಬರಿ 50 ಸಾವಿರ ಯುವ ಜನರು ರಾಷ್ಟ್ರೀಯ ಹಾಡು ’ವಂದೇ ಮಾತರಂ’ ಹಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಈ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಸಮಾರಂಭದಲ್ಲಿ ಭಾಗವಹಿಸಿದ್ದ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು, ವಂದೇ ಮಾತರಂ ಹಾಡು ದೇಶದ ಜನರನ್ನು ಒಗ್ಗೂಡಿಸುತ್ತದೆ ಎಂದರು.
ಅಲ್ಲದೇ ವಂದೇ ಮಾತರಂ ಜಗತ್ತಿನ ಎರಡನೇ ಅತೀ ಹೆಚ್ಚು ಜನಪ್ರಿಯ ಹಾಡು ಎಂಬುದನ್ನು 155 ದೇಶಗಳು ಒಪ್ಪಿಕೊಂಡಿವೆ, ಇದು ಭಾರತಕ್ಕೆ ಹೆಮ್ಮೆ ತರುವ ಸಂಗತಿ ಎಂದರು.
ಭಾರತವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಂತೆ ಯುವ ಜನತೆಗೆ ಕರೆ ನೀಡಿದ ಅವರು, ಈ ದೇಶದ ಭವಿಷ್ಯ ಯುವ ಜನತೆಯ ಕೈಯಲ್ಲಿ ಸುರಕ್ಷಿತವಾಗಿದೆ ಎಂದರು.
ಅಲ್ಲದೇ ಮರ, ಗೋವು, ಮಹಿಳೆ ಮತ್ತು ಗಂಗೆಯನ್ನು ರಕ್ಷಿಸುವಂತೆ ಅವರು ಯುವಜನತೆಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು, ಭಾರತದ ಸಂಸ್ಕೃತಿ, ಕಲೆ ಮತ್ತು ಇತಿಹಾಸವನ್ನು ಪ್ರಚಾರಪಡಿಸುವುದಕ್ಕಾಗಿ ಯುವಜನತೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಬೇಕು ಎಂದರು.
ಸಂಗೀತಗಾರ ವಿಕ್ರಮ್ ಹಝಾರ ಅವರ ನೇತೃತ್ವದಲ್ಲಿ 150 ಸಿತಾರ್ ವಾದಕರು ವಂದೇ ಮಾತರಂ ಹಾಡಿಗೆ ವಿಶೇಷ ಮೆರುಗನ್ನು ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.