ನವದೆಹಲಿ: ಮತಾಂತರದ ಬಗ್ಗೆ ಅಲಹಾಬಾದ್ ಹೈಕೋರ್ಟ್ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದು, ದೊಡ್ಡ ಪ್ರಮಾಣದ ಅಕ್ರಮ ಧಾರ್ಮಿಕ ಮತಾಂತರಗಳು ಮುಂದುವರಿದರೆ ದೇಶದ ಬಹುಸಂಖ್ಯಾತ ಜನಸಂಖ್ಯೆಯು ಅಲ್ಪಸಂಖ್ಯಾತವಾಗಬಹುದು ಎಂದು ಎಚ್ಚರಿಸಿದೆ.
ದೇಶದ ಪ್ರಜೆಗಳ ಮತಾಂತರಕ್ಕೆ ಅನುಕೂಲ ಮಾಡಿಕೊಡುವ ಕೂಟಗಳನ್ನು ತಕ್ಷಣವೇ ನಿಲ್ಲಿಸುವ ಅಗತ್ಯವನ್ನು ಹೈಕೋರ್ಟ್ ಒತ್ತಿ ಹೇಳಿದೆ.
ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರು ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯಿದೆ, 2021 ರ ಅಡಿಯಲ್ಲಿ ಹಮೀರ್ಪುರದ ಮೌದಾಹ ನಿವಾಸಿ ಕೈಲಾಶ್ ಎಂಬಾತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಕೈಲಾಶ್ ವಿರುದ್ಧ ಕಾನೂನುಬಾಹಿರ ಧಾರ್ಮಿಕ ಮತಾಂತರದ ಆರೋಪ ಇದೆ. ಸಾಮಾಜಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕೈಲಾಶ್ ತನ್ನ ಸಹೋದರ ರಾಮ್ಫಾಲ್ನನ್ನು ದೆಹಲಿಗೆ ಕರೆದೊಯ್ದಿದ್ದಾನೆ, ಆದರೆ ಅಲ್ಲಿ ಕ್ರೈಸ್ಥ ಧರ್ಮಕ್ಕೆ ಮತಾಂತರ ಮಾಡಲಾಗಿದೆ. ಹೀಗಾಗಿ ಇದುವರೆಗೆ ಆತ ಮನೆಗೆ ವಾಪಾಸ್ ಆಗಲಿಲ್ಲ ಎಂದು ದೂರುದಾರರಾದ ರಾಮ್ಕಾಲಿ ಪ್ರಜಾಪತಿ ಎಫ್ಐಆರ್ ದಾಖಲಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಹಲವಾರು ಇತರ ಗ್ರಾಮಸ್ಥರನ್ನೂ ಕರೆದೊಯ್ಯಲಾಗಿತ್ತು, ಅಲ್ಲಿ ಅವರನ್ನು ಆಮಿಷಕ್ಕೆ ಒಳಪಡಿಸಿ ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಲಾಗಿದೆ ಎಂದು ಪ್ರಜಾಪತಿ ಆರೋಪ ಮಾಡಲಿದ್ದಾರೆ.
ರಾಮ್ಕಾಲಿ ಹೇಳುವಂತೆ ಆಕೆಯ ಸಹೋದರ ಮಾನಸಿಕ ಅಸ್ವಸ್ಥನಾಗಿದ್ದ. ಪಾಸ್ಟರ್ ಸೋನು ಎಂಬಾತ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ರಾಮ್ಪಾಲ್ ಮತ್ತು ಇತರ ಗ್ರಾಮಸ್ಥರನ್ನು ಈತ ಕೊಂಡೊಯ್ದಿದ್ದ ಎಂಬುದು ಬಳಿಕ ಬಹಿರಂಗವಾಗಿತ್ತು. ಪಾಸ್ಟರ್ ಸೋನು ಮತಾಂತರವನ್ನು ನಡೆಸಿದ್ದ ಎಂಬುದು ತಿಳಿದು ಬಂದಿದೆ. ಆದರೆ ಈಗ ಜಾಮೀನಿನ ಮೇಲೆ ಆತ ಬಿಡುಗಡೆಯಾಗಿದ್ದಾನೆ.
ರಾಜ್ಯದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರಜಾಪತಿ ಅವರ ವರ ವಾದಿಸಿ, ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಲು ಇಂತಹ ಕೂಟಗಳನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸಲಾಗುತ್ತಿದೆ, ಕೈಲಾಶ್ ಗ್ರಾಮಸ್ಥರನ್ನು ಇದಕ್ಕ ಕರೆದೊಯ್ಯುವಲ್ಲಿ ತೊಡಗಿಸಿಕೊಂಡಿದ್ದಾನೆ ಮತ್ತು ಜನರಿಗೆ ಭಾರೀ ಹಣ ನೀಡಿ ಮತಾಂತರ ಮಾಡಿಸುತ್ತಿದ್ದಾನೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.