ನವದೆಹಲಿ: ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಭೇಟಿ ಮಾಡಿದ್ದು, ನೌಕಾಪಡೆಗೆ ಸಂಬಂಧಿಸಿದ ವಿವರಗಳನ್ನು ನೀಡಿದರು.
ಭಾರತೀಯ ನೌಕಾಪಡೆಯಿಂದ ಪ್ರಗತಿಯಲ್ಲಿರುವ ವಿವಿಧ ಕಾರ್ಯಾಚರಣೆ, ಆಡಳಿತಾತ್ಮಕ ಮತ್ತು ಮೂಲಸೌಕರ್ಯ ಚಟುವಟಿಕೆಗಳ ಬಗ್ಗೆ ಪ್ರಧಾನಮಂತ್ರಿ ಅವರಿಗೆ ತ್ರಿಪಾಠಿ ವಿವರಣೆ ನೀಡಿದರ ಎಂದು ವರದಿಗಳು ತಿಳಿಸಿವೆ.
ನೌಕಾಪಡೆಯ ಬದ್ಧತೆಯನ್ನು ಪುನರುಚ್ಛರಿಸಿದ ಅವರು, ಎಲ್ಲಾ ಸಮಯದಲ್ಲೂ ಯುದ್ಧ-ಸಿದ್ಧರಾಗಿರಲು ಮತ್ತು ಸಾಮರ್ಥ್ಯದ ನಿರ್ಮಾಣದಲ್ಲಿ ಆತ್ಮನಿರ್ಭರತೆಯನ್ನು ಕೇಂದ್ರೀಕರಿಸುವ ಮೂಲಕ ರಾಷ್ಟ್ರೀಯ ಕಡಲ ಹಿತಾಸಕ್ತಿಗಳನ್ನು ಕಾಪಾಡುವ ಭರವಸೆ ನೀಡಿದರು.
ಸಿಎನ್ಎಸ್ ತ್ರಿಪಾಠಿ ಅವರು ರಾಷ್ಟ್ರ ನಿರ್ಮಾಣದ ಬಗೆಗಿನ ವಿವಿಧ ಉಪಕ್ರಮಗಳ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದರು, ಜೊತೆಗೆ ಎಲ್ಲಾ ಸಿಬ್ಬಂದಿಗೆ ತರಬೇತಿ ಮತ್ತು ಕಲ್ಯಾಣ ಕ್ರಮಗಳ ಮೇಲೆ ಗಮನಹರಿಸಲಾಗುತ್ತಿದೆ ಮತ್ತು ವಿವಿಧ ಡೊಮೇನ್ಗಳಲ್ಲಿ ಏಕೀಕರಣವನ್ನು ಹೆಚ್ಚಿಸುವ ಮೂಲಕ ತ್ರಿಸೇವಾ ಸಮನಯ್ವಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.