ನವದೆಹಲಿ: ದೇಶದ ಸಂವಿಧಾನದಲ್ಲಿರುವಂತೆ ಎನ್ಸಿಇಆರ್ಟಿ ಪಠ್ಯಪುಸ್ತಕಗಳಲ್ಲಿ “ಭಾರತ” ಮತ್ತು “ಇಂಡಿಯಾ” ಎರಡೂ ಪರಗಳನ್ನು ಬಳಸಲಾಗಿದೆ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ಹೇಳಿದ್ದಾರೆ.
ಸಮಾಜ ವಿಜ್ಞಾನ ಪಠ್ಯಕ್ರಮದಲ್ಲಿ ಕೆಲಸ ಮಾಡುತ್ತಿರುವ ಉನ್ನತ ಮಟ್ಟದ ಸಮಿತಿಯು ಎಲ್ಲಾ ತರಗತಿಗಳಿಗೆ ಶಾಲಾ ಪಠ್ಯಪುಸ್ತಕಗಳಲ್ಲಿ “ಇಂಡಿಯಾ” ಬದಲು”ಭಾರತ್” ಎಂದು ಬದಲಿಸಬೇಕೆಂದು ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಸಕ್ಲಾನಿ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ.
ಪುಸ್ತಕಗಳಲ್ಲಿ ಎರಡೂ ಪದಗಳನ್ನು ಬಳಸಲಾಗುವುದು ಮತ್ತು ಎನ್ಸಿಇಆರ್ಟಿಗೆ “ಭಾರತ” ಅಥವಾ “ಇಂಡಿಯಾ” ಯಾವುದರ ಬಗ್ಗೆಯೂ ದ್ವೇಷವಿಲ್ಲ ಎಂದು ಹೇಳಿದ್ದಾರೆ.
“ಇವು ಇಂಟರ್ಚೇಂಜೇಬಲ್ ಪದಗಳು. ನಮ್ಮ ಸಂವಿಧಾನ ಏನು ಹೇಳುತ್ತದೆಯೋ ಅದನ್ನು ಎತ್ತಿಹಿಡಿಯುವುದು ನಮ್ಮ ನಿಲುವು. ನಾವು ಇಂಡಿಯಾ ಎಂದೂ ಬಳಸಬಹುದು, ಭಾರತ ಎಂದೂ ಬಳಸಬಹುದು, ಇದರಲ್ಲಿ ಏನು ಸಮಸ್ಯೆ? ನಾವು ಆ ಚರ್ಚೆಯಲ್ಲಿಲ್ಲ. ಎಲ್ಲಿ ಸರಿಹೊಂದುತ್ತದೆಯೋ ಅಲ್ಲಿ ನಾವು ಭಾರತ ಎಂದು ಬಳಸುತ್ತೇವೆ, ಎಲ್ಲಿ ಸರಿಹೊಂದುತ್ತದೆಯೋ ಅಲ್ಲಿ ನಾವು ಇಂಡಿಯಾ ಎಂದು ಬಳಸುತ್ತೇವೆ” ಎಂದು ಅವರು ಹೇಳಿದರು.
“ಎರಡನ್ನೂ ಈಗಾಗಲೇ ನಮ್ಮ ಪಠ್ಯಪುಸ್ತಕಗಳಲ್ಲಿ ಬಳಸಿರುವುದನ್ನು ನೀವು ನೋಡಿರಬಹುದು ಮತ್ತು ಹೊಸ ಪಠ್ಯಪುಸ್ತಕಗಳಲ್ಲೂ ಹಾಗೆಯೇ ಮುಂದುವರಿಯುತ್ತದೆ. ಇದು ಅನುಪಯುಕ್ತ ಚರ್ಚೆಯಾಗಿದೆ” ಎಂದು ಸಕ್ಲಾನಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.