ನವದೆಹಲಿ: ಕುವೈತ್ನಲ್ಲಿ ಅಗ್ನಿ ದುರಂತದಲ್ಲಿ ಮೃತಪಟ್ಟವರ ಪಾರ್ಥಿವ ಶರೀರವನ್ನು ಹೊತ್ತ ವಿಶೇಷ ಐಎಎಫ್ ವಿಮಾನ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ದುರ್ಘಟನೆಯಲ್ಲಿ ಮೃತಪಟ್ಟ 45 ಭಾರತೀಯ ಪ್ರಜೆಗಳ ಅವಶೇಷಗಳನ್ನು ಕೊಚ್ಚಿಗೆ ಕಳುಹಿಸಲಾಗಿದೆ.
ಕುವೈತ್ನಲ್ಲಿನ ಭಾರತೀಯ ವಲಸಿಗ ಸಮುದಾಯ ನೆಲೆಸಿದ್ದ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅವಘಢ ಘಟನೆಯು ತೀವ್ರ ಸುರಕ್ಷತಾ ಲೋಪಗಳನ್ನು ಎತ್ತಿ ತೋರಿಸಿದೆ. ಈ ಬಗ್ಗೆ ಭಾರತ ಕೂಡ ಕುವೈತ್ ಜೊತೆಗೆ ಮಾತುಕತೆ ನಡೆಸಿದೆ.
ಕುವೈತ್ನ ಆಂತರಿಕ ಸಚಿವ ಶೇಖ್ ಫಹದ್ ಅಲ್-ಯೂಸೆಫ್ ಅವರು ‘ಕಾರ್ಮಿಕ ಜನದಟ್ಟಣೆ ಮತ್ತು ನಿರ್ಲಕ್ಷ್ಯದ’ ಸಮಸ್ಯೆಗಳನ್ನು ಪರಿಹರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ, ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಕಟ್ಟಡಗಳನ್ನು ಮುಚ್ಚಲಾಗುವುದು ಎಂದು ಎಚ್ಚರಿಸಿದ್ದಾರೆ.
ಏಳು ಅಂತಸ್ತಿನ ಕಟ್ಟಡವನ್ನು ಆರಿವರಿಸಿದ ಬೆಂಕಿಯು ನೆಲಮಹಡಿಯಲ್ಲಿ ಇರಿಸಲಾಗಿದ್ದ ಸುಮಾರು ಎರಡು ಡಜನ್ ಗ್ಯಾಸ್ ಸಿಲಿಂಡರ್ಗಳು ಮತ್ತು ಇಕ್ಕಟ್ಟಾದ ಕೋಣೆಗಳಲ್ಲಿ ಇದ್ದ ಕಾಗದ, ಕಾರ್ಡ್ಬೋರ್ಡ್ ಮತ್ತು ಪ್ಲಾಸ್ಟಿಕ್ನಂತಹ ದಹಿಸುವ ವಸ್ತುಗಳಿಂದ ಉಲ್ಬಣಗೊಂಡು ಭಾರೀ ಅನಾಹುತವನ್ನೇ ಸೃಷ್ಟಿ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.