ನವದೆಹಲಿ: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್ ಅವರನ್ನು ಗುರುವಾರ ಮರು ನೇಮಕ ಮಾಡಲಾಗಿದೆ. ಪಿಕೆ ಮಿಶ್ರಾ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿಯೂ ಮರು ನೇಮಕ ಮಾಡಿದೆ.
ಸಂಪುಟದ ನೇಮಕಾತಿ ಸಮಿತಿಯು ಡಾ ಪಿ ಕೆ ಮಿಶ್ರಾ ಮತ್ತು ಅಜಿತ್ ದೋವಲ್ ಅವರನ್ನು ಮರುನೇಮಕಗೊಳಿಸುವುದರೊಂದಿಗೆ, ಇಬ್ಬರು ನಿವೃತ್ತ ಅಧಿಕಾರಿಗಳು ಪ್ರಧಾನ ಮಂತ್ರಿಗಳಿಗೆ ಸುದೀರ್ಘ ಸೇವೆ ಸಲ್ಲಿಸಿದ ಪ್ರಧಾನ ಸಲಹೆಗಾರರಾಗಲಿದ್ದಾರೆ.
ಡಾ.ಮಿಶ್ರಾ ಅವರು ಪಿಎಂಒದಲ್ಲಿ ಆಡಳಿತಾತ್ಮಕ ವಿಷಯಗಳು ಮತ್ತು ನೇಮಕಾತಿಗಳನ್ನು ನಿರ್ವಹಿಸುತ್ತಿದ್ದರೆ, ದೋವಲ್ ಅವರು ರಾಷ್ಟ್ರೀಯ ಭದ್ರತೆ, ಮಿಲಿಟರಿ ವ್ಯವಹಾರಗಳು ಮತ್ತು ಗುಪ್ತಚರವನ್ನು ನಿರ್ವಹಿಸಲಿದ್ದಾರೆ.
1968ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ದೋವಲ್ ಅವರು ಪ್ರಧಾನಿಯವರಿಗೆ ಕಾರ್ಯತಂತ್ರದ ಚಿಂತನೆ ಮತ್ತು ಕಾರ್ಯಾಚರಣೆಯ ಯೋಜನೆಗಳಲ್ಲಿ ಸಲಹೆ ನೀಡಲಿದ್ದಾರೆ. ಅವರು ಹೆಸರಾಂತ ಭಯೋತ್ಪಾದನಾ ನಿಗ್ರಹ ತಜ್ಞ ಮತ್ತು ಪರಮಾಣು ವಿಷಯಗಳ ಬಗ್ಗೆ ಪರಿಣಿತರೂ ಹೌದು.
ಡಾ ಪಿ ಕೆ ಮಿಶ್ರಾ ಅವರು 1972 ರ ಬ್ಯಾಚ್ನ ನಿವೃತ್ತ ಅಧಿಕಾರಿಯಾಗಿದ್ದು, ಅವರು ಭಾರತ ಸರ್ಕಾರಕ್ಕರ ಕೃಷಿ ಕಾರ್ಯದರ್ಶಿಯಾಗಿ ಕಳೆದ ಒಂದು ದಶಕದಿಂದ ಪಿಎಂ ಮೋದಿಯವರೊಂದಿಗೆ ಇದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.