ಮುಂಬಯಿ: ಧಾರ್ಮಿಕ ವೈಷಮ್ಯಗಳ ಸುದ್ದಿಯೇ ಸದ್ದು ಮಾಡುತ್ತಿರುವ ಈ ಸಂದರ್ಭದಲ್ಲಿ ಮುಂಬಯಿಯ ಮುಸ್ಲಿಂ ಮಹಿಳೆಯೊಬ್ಬಳ ಕಥೆ ಧಾರ್ಮಿಕ ಸಹಿಷ್ಣುತೆ ಭಾರತದಲ್ಲಿ ಇನ್ನೂ ಜೀವಂತವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ.
27 ವರ್ಷದ ಇಯಾಝ್ ಶೇಕ್ ತನ್ನ ತುಂಬು ಗರ್ಭಿಣಿ ಪತ್ನಿ ನೂರ್ ಜಹಾನ್ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಬೆಳಿಗ್ಗೆ 4 ಗಂಟೆಗೆ ಆಸ್ಪತ್ರೆಗೆ ಹೋಗುವ ಸಲುವಾಗಿ ಟ್ಯಾಕ್ಸಿಯಲ್ಲಿ ಕೂತಿದ್ದಾರೆ.
ಆದರೆ ನೋವು ತೀವ್ರಗೊಂಡಾಗ ಟ್ಯಾಕ್ಸಿ ಚಾಲಕ ತನ್ನ ವಾಹನದಲ್ಲೇ ಅವರಿಗೆ ಡೆಲಿವರಿಯಾಗುತ್ತದೆ ಎಂದು ಭಯಗೊಂಡು ಅವರನ್ನು ಮಾರ್ಗ ಮಧ್ಯೆಯೇ ಕೆಳಗಿಳಿಸಿದ್ದಾನೆ. ನೂರ್ ಮಾರ್ಗದಲ್ಲೇ ಅಸ್ವಸ್ಥರಾಗಿದ್ದಾರೆ, ಏನೂ ಮಾಡಬೇಕೆಂದು ತೋಚದೆ ಇಯಾಝ್ ಅವರು ಪಕ್ಕದಲ್ಲೇ ಇದ್ದ ಗಣೇಶ ಮಂದಿರದ ಬಳಿ ಬಂದು ಮತ್ತೊಂದು ಟ್ಯಾಕ್ಸಿ ಹಿಡಿಯಲು ಪ್ರಯತ್ನಿಸಿದ್ದಾರೆ.
ಆದರೆ ದೇಗುಲದ ಒಳಗಿದ್ದ ಮಹಿಳೆಯರಿಗೆ ನೂರ್ ಅವರ ಗಂಭೀರ ಸ್ಥಿತಿಯ ಅರಿವಾಗಿ ಅವರನ್ನು ದೇಗುಲದ ಒಳಗೆ ಕರೆದುಕೊಂಡು ಬಂದಿದ್ದಾರೆ, ಬಳಿಕ ಅಕ್ಕಪಕ್ಕದ ಮನೆಯಿಂದ ಬೆಡ್ಶೀಟ್ ಸೀರೆಗಳನ್ನು ತಂದು ಬಟ್ಟೆಯ ಒಂದು ಕೋಣೆಯನ್ನು ನಿರ್ಮಿಸಿ ನೂರ್ ಅವರಿಗೆ ಹಿರಿಯ ಮಹಿಳೆಯೊಬ್ಬರ ಸಹಾಯದಿಂದ ಡೆಲಿವರಿ ಮಾಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೂರ್, ’ನಾನು ತುಂಬಾನೇ ಭಯಗೊಂಡಿದ್ದೇ ಮಾರ್ಗದಲ್ಲೇ ಡೆಲಿವರಿಯಾಗುತ್ತದೋ ಏನೋ ಎಂಬ ಭಯ ನನಗಿತ್ತು. ದೇಗುಲವನ್ನು ಕಂಡ ನನಗೆ ದೇವರು ಸಹಾಯಕ್ಕೆ ಬಂದೇ ಬರುತ್ತಾನೆ ಎಂಬ ನಂಬಿಕೆ ಬಂತು. ಗಣಪತಿಯ ಮುಂದೆ ಜನ್ಮ ನೀಡುವುದಕ್ಕಿಂತಲೂ ಉತ್ತಮವಾದುದು ಬೇರೇನಿದೆ. ಮಗುವಿಗೆ ‘ಗಣೇಶ’ ಎಂದೇ ನಾಮಕರಣ ಮಾಡುತ್ತೇನೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.