ಹೈದರಾಬಾದ್: ಹೈದರಾಬಾದಿನ ಬಳೆ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಬಾಲಕಾರ್ಮಿಕನೊಬ್ಬ ಪ್ರಧಾನಿಗೆ ಪತ್ರ ಬರೆದು ಸಹಾಯಯಾಚಿಸಿದ್ದಾನೆ. ತನ್ನ ತಾಯಿಯನ್ನು ಹುಡುಕಿಕೊಡಿ ಎಂದು ಅಂಗಲಾಚಿದ್ದಾನೆ. ನನಗೂ ಒಳ್ಳೆಯ ದಿನ ಬರುವಂತೆ ಮಾಡಿ ಎಂದು ಬೇಡಿಕೊಂಡಿದ್ದಾನೆ.
ಪ್ರೀತಿಯ ಪ್ರಧಾನಿ ನರೇಂದ್ರ ಮೋದಿಯವರೇ,
ನನ್ನ ಹೆಸರು ಜಿತೇಂದರ್, ನನಗೀಗ 7 ವರ್ಷ ವಯಸ್ಸು. ಬಿಹಾರ ಮೂಲದವನು. ಬಿಹಾರದ ಯಾವ ಊರಿನವನು ಎಂದು ಕೇಳಬೇಡಿ ನನಗದು ಗೊತ್ತಿಲ್ಲ.
ಕಳೆದ ಎರಡು ವರ್ಷದಿಂದ ಹೈದರಾಬಾದಿನಲ್ಲಿದ್ದೇನೆ. ಹಿರಿಯ ಮಗನಾಗಿ ಹುಟ್ಟಿದ ತಪ್ಪಿಗೆ ಮನೆಯವರನ್ನು ನನ್ನನ್ನು ಒಂದು ಸಾವಿರ ರೂಪಾಯಿಗೆ ಮಾರಿದರು. ನನ್ನ ತಮ್ಮ, ತಂಗಿಯರು ಮನೆಯಲ್ಲೇ ಇದ್ದಾರೆ ಎಂದು ಭಾವಿಸಿದ್ದೇನೆ. ಇಲ್ಲಿಗೆ ಬಂದ ಬಳಿಕ ಕುಟುಂಬದ ಬಗ್ಗೆ ಏನೇನೂ ನನಗೆ ಗೊತ್ತಿಲ್ಲ. ನಾನು ಅವರನ್ನು ಕಳೆದುಕೊಳ್ಳುತ್ತಿದ್ದೇನೆ.
ಇಲ್ಲಿ ಬಳೆ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದೇನೆ. ಹೈದರಾಬಾದ್ ಸಮೀಪದ ಚಾರ್ಮಿನಾರ್ ಹತ್ತಿರ ಇದು ಇದೆ. ಇಲ್ಲಿ ನಾವು ಅನೇಕ ಬಾಲಕರಿದ್ದು, ಒಂದು ಸಣ್ಣ ಕೋಣೆಯಲ್ಲಿ ಎಲ್ಲರೂ ಜೀವಿಸುತ್ತಿದ್ದೇವೆ. ಸುಮಾರು 20 ರಿಂದ 25 ರಷ್ಟು ಬಾಲಕರು ಇಲ್ಲಿ ಇದ್ದಾರೆ ಎಂದು ಕೆಲವರು ಹೇಳುತ್ತಾರೆ, ನನಗೆ ಸರಿಯಾಗಿ ಗೊತ್ತಿಲ್ಲ, ಏಕೆಂದರೆ ಲೆಕ್ಕ ಮಾಡಲು ನನಗೆ ಗೊತ್ತಿಲ್ಲ.
ಆರು ಗಂಟೆಗೆ ಏಳುತ್ತೇನೆ, ಬಳೆ ಕೆಲಸ ಆರಂಭಿಸುತ್ತೇನೆ. ನನ್ನ ಮಲಗುವ ಸ್ಥಳವೇ ನನ್ನ ಕೆಲಸದ ಸ್ಥಳ. ದಿನಕ್ಕೆ 19 ಗಂಟೆ ದುಡಿಯ ಬೇಕು ಎಂದು ನನಗೆ ತಿಳಿಸಲಾಗಿದೆ. ಇದರ ಬಗ್ಗೆ ನನಗೆ ಗೊತ್ತಿಲ್ಲ, ಏಕೆಂದರೆ ನನಗೆ ಲೆಕ್ಕ ಗೊತ್ತಿಲ್ಲ.
ಕೆಲಸ ಮಾಡಿ ಸುಸ್ತಾಗುತ್ತದೆ. ಸ್ವಲ್ಪ ಮಲಗಿದರೆ ಒಡೆಯ ಬಂದು ಬಡಿಯುತ್ತಾನೆ. ಅವನಿಗೆ ನಾನು ಮಲಗುವುದು ಹೇಗೆ ಗೊತ್ತಾಯ್ತು ಎಂದು ಯೋಚಿಸುತ್ತಿದೆ. ಆಗ ಗೊತ್ತಾಯ್ತು ನಮ್ಮ ಕೋಣೆಯಲ್ಲಿ ಸಿಸಿ ಕ್ಯಾಮೆರಾ ಇದೆ ಎಂದು. ಅಮೇಲೆ ನಾನು ಮಲಗದಂತೆ ಎಚ್ಚರ ವಹಿಸುತ್ತಿದ್ದೇನೆ.
ತಾಯಿಯನ್ನು, ಆಕೆಯ ಸೆರಗಲ್ಲಿ ಮುಖ ಮುಚ್ಚಿ ಅಳುವುದನ್ನು, ಆಕೆಯೊಂದಿಗೆ ಆಟ ಆಡುವುದನ್ನು ನಾನು ಮಿಸ್ ಮಾಡುತ್ತಿದ್ದೇನೆ. ತಂಗಿ, ತಮ್ಮಂದಿರನ್ನೂ ಮಿಸ್ ಮಾಡುತ್ತಿದ್ದೇನೆ. ಕಳೆದ ವರ್ಷ ಪೊಲೀಸರು ನಮ್ಮನ್ನು ರಕ್ಷಿಸಿದ್ದರು. ಬಳಿಕ ಒಬ್ಬ ಅಂಕಲ್ ಮತ್ತೆ ನಮ್ಮನ್ನು ಇಲ್ಲಿಗೇ ತಂದು ಹಾಕಿದ.
ಕಳೆದ ವಾರ ಮತ್ತೆ ಪೊಲೀಸರು ನಮ್ಮನ್ನು ರಕ್ಷಿಸಿದ್ದಾರೆ. ಇದೀಗ ನಾವು ಸೈದಾಬಾದ್ನ ಮಕ್ಕಳ ಕಲ್ಯಾಣ ಇಲಾಖೆಯಲ್ಲಿದ್ದೇವೆ. ಇಲ್ಲಿಗೆ ಬಂದ ಮಹಿಳೆಯೊಬ್ಬಳು ನನ್ನ ಸ್ನೇಹಿತನನ್ನು ತೋರಿಸಿ ಈತ ನನ್ನ ಮಗ ಎಂದಿದ್ದಳು. ಆದರೆ ಆತ ಇವಳು ನನ್ನ ತಾಯಿಯಲ್ಲ ಎಂದಿದ್ದ. ನನಗೆ ಇಲ್ಲಿ ಏನಾಗುತ್ತಿದೆ ಎಂದು ತಿಳಿಯುತ್ತಿಲ್ಲ.
ನನ್ನ ತಾಯಿ ನನ್ನ ಬಳಿ ಬರುವಳೇ? ಬರುತ್ತಾಳೆ ಎಂದು ನಂಬುತ್ತೇನೆ. ಇಲ್ಲಿ ತಿಂಗಳಿಗೆ ಒಂದು ಸಾವಿರ ದುಡಿಯುತ್ತೇನೆ. ಆದರೆ ಶಾಲೆಗೆ ಹೋಗುವುದು ಮುಖ್ಯವಲ್ಲವೇ? ಆಗ ಮಾತ್ರ ಹಣವನ್ನು ಲೆಕ್ಕ ಮಾಡಲು ಸಾಧ್ಯ ತಾನೆ.
ಸರ್! ನೀವು ಎಲ್ಲರ ಬಳಿಯೂ ಒಳ್ಳೆಯ ದಿನಗಳು ಬರುತ್ತದೆ ಎನ್ನುತ್ತೀರಿ ಎಂಬುದನ್ನು ಕೇಳಿದ್ದೇನೆ. ನನ್ನ ತಾಯಿಯನ್ನು ಹೈದರಾಬಾದ್ಗೆ ಕಳುಹಿಸುತ್ತೀರಾ, ಆಕೆ ನನ್ನನ್ನು ಇಲ್ಲಿಂದ ವಾಪಾಸ್ ಮನೆಗೆ ಕರೆದುಕೊಂಡು ಹೋಗುವಂತೆ ಮಾಡುತ್ತೀರಾ? ನಾನು ಒಳ್ಳೆಯ ದಿನವನ್ನು ನೋಡಲು ಬಯಸುತ್ತೇನೆ.
ಪ್ರಣಾಮ್
ಜಿತೇಂದರ್
ಎನ್ಜಿಓವೊಂದು ಈತನ ಪತ್ರವನ್ನು ಮೋದಿಗೆ ಕಳುಹಿಸಿಕೊಟ್ಟಿದೆ. ಈ ಪತ್ರವನ್ನು ಓದಿ ಮೋದಿ ಆತನಿಗೆ ಸಹಾಯ ಮಾಡುವರೇ ಎಂಬುದನ್ನು ಕಾದು ನೋಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.