ನವದೆಹಲಿ: ಜಮ್ಮುಕಾಶ್ಮೀರದ ದೇಗುಲವೊಂದರಿಂದ 24 ವರ್ಷಗಳ ಹಿಂದೆ ಕದಿಯಲಾಗಿದ್ದ 10ನೇ ಶತಮಾನದ ದುರ್ಗಾದೇವಿಯ ವಿಗ್ರಹವನ್ನು ಜರ್ಮನ್ ಭಾರತಕ್ಕೆ ವಾಪಾಸ್ ನೀಡಿದೆ. ವಿದೇಶಕ್ಕೆ ಕಳ್ಳ ಸಾಗಾಣೆಯಾಗಿದ್ದ ಈ ವಿಗ್ರಹ ಜರ್ಮನಿಯ ಬಳಿ ಇತ್ತು.
8 ಕೈಗಳುಳ್ಳ ಮಹಿಷಮರ್ಧಿನಿಯ ವಿಗ್ರಹ ಇದಾಗಿದ್ದು, ಸೆಪ್ಟಂಬರ್ 23ರಂದು ಜರ್ಮನಿಯ ಬದೆನ್-ವರ್ಟ್ಬರ್ಗ್ ಸ್ಟೇಟ್ ಆಡಳಿತ ಈ ವಿಗ್ರಹವನ್ನು ಬರ್ಲಿನ್ನಲ್ಲಿನ ಭಾರತೀಯ ರಾಯಭಾರಿಗಳಿಗೆ ಹಸ್ತಾಂತರ ಮಾಡಿತ್ತು. ಸೋಮವಾರ ಇದನ್ನು ಭಾರತಕ್ಕೆ ಕರೆತರಲಾಗಿದ್ದು, ಹೈದರಾಬಾದ್ ಹೌಸ್ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ನರೇಂದ್ರ ಮೋದಿಯವರು, ’10ನೇ ಶತಮಾನದ ಮಹಿಷಮರ್ಧಿನಿ ಅವತಾರದ ದೇವಿಯ ವಿಗ್ರಹವನ್ನು ವಾಪಾಸ್ ಮಾಡಿದ್ದಕ್ಕಾಗಿ ಚಾನ್ಸೆಲರ್ ಮಾರ್ಕೆಲ್ ಮತ್ತು ಜರ್ಮನ್ ಜನತೆಗೆ ಧನ್ಯವಾದಗಳು’ ಎಂದಿದ್ದಾರೆ.
ಜಮ್ಮು ಕಾಶ್ಮೀರದ ಪುಲ್ವಮ ಜಿಲ್ಲೆಯ ತೆಂಗ್ಪೋನ ದೇಗುಲದಿಂದ 1990ನೇ ಇಸವಿಯಲ್ಲಿ ಈ ವಿಗ್ರಹವನ್ನು ಕದಿಯಲಾಗಿತ್ತು. ಬಳಿಕ ಅದು ವಿದೇಶಕ್ಕೆ ಕಳ್ಳಸಾಗಾಣೆಯಾಗಿತ್ತು. ಸುಭಾಷ್ ಕಪೂರ್ ಎಂಬಾತ ಇದನ್ನು ನ್ಯೂಯಾರ್ಕ್ನ ಮ್ಯೂಸಿಯಂವೊಂದಕ್ಕೆ ಮಾರಿದ್ದ. ಕಪೂರ್ ಇದರ ಕಳ್ಳಸಾಗಾಣೆಯ ಮುಖ್ಯ ರುವಾರಿಯಾಗಿದ್ದಾನೆ. 2011ರಲ್ಲಿ ಇತನನ್ನು ಫ್ರಾಂಕ್ಪೋರ್ಟ್ನಲ್ಲಿ ಬಂಧಿಸಲಾಗಿತ್ತು.
ಬಳಿಕ ಅದೇಗೋ ಜರ್ಮನ್ ತಲುಪಿದ್ದ ವಿಗ್ರಹ ಇದೀಗ ಮತ್ತೆ ಭಾರತಕ್ಕೆ ಆಗಮಿಸಿದೆ. ಚಾನ್ಸೆಲರ್ ಏಂಜೆಲೋ ಮಾರ್ಕೆಲ್ ಭಾರತದಲ್ಲಿ ಇರುವ ವೇಳೆಯೇ ಇದನ್ನು ಹಸ್ತಾಂತರ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.