ನವದೆಹಲಿ: ಭಾರತ ಪ್ರವಾಸದಲ್ಲಿರುವ ಜರ್ಮನ್ ಚಾನ್ಸೆಲರ್ ಏಂಜೆಲೋ ಮಾರ್ಕೆಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಕ್ಷಣೆಗೆ ಸಂಬಂಧಿಸಿದ ದ್ವಿಪಕ್ಷೀಯ ವ್ಯವಹಾರಗಳ ವಿಸ್ತರಣೆ, ಭದ್ರತೆ, ಶಿಕ್ಷಣ, ಕೌಶಲ್ಯಾಭಿವೃದ್ಧಿ, ಕೃಷಿ, ನವೀಕರಿಸಬಹುದಾದ ಶಕ್ತಿ ಮುಂತಾದ ಪರಸ್ಪರ ಹಿತಾಸಕ್ತಿಯ ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾರ್ಕೆಲ್, ’ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ವಿವಿಧ ರಂಗಗಳಲ್ಲಿ ತಮ್ಮ ಸಹಕಾರವನ್ನು ಗಟ್ಟಿಗೊಳಿಸಬೇಕಾಗಿದೆ. ಡಿಜಟಲೀಕರಣದಲ್ಲಿನ ಭಾರತದ ಅನುಭವ ನಮಗೆ ಸಹಕಾರಿಯಾಗಲಿದೆ. ಇಂಧನ ಶಕ್ತಿ ಸಹಕಾರಗಳು ಈಗಲೂ ತಳಮಟ್ಟದಲ್ಲಿದೆ, ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ’ ಎಂದರು.
ಪ್ರಧಾನಿ ಮೋದಿ ಮಾತನಾಡುತ್ತಾ, ’ಮಾರ್ಕೆಲ್ ಅವರ ನಾಯಕತ್ವ ಆತ್ಮವಿಶ್ವಾಸದ ಮೂಲ ಮತ್ತು ಕಷ್ಟದ ಸ್ಥಿತಿಯಲ್ಲಿರುವ ಯುರೋಪ್ಗೆ ಆಶಾಕಿರಣ. ೨೫ ವರ್ಷಗಳಲ್ಲಿನ ಜರ್ಮನಿಯ ಮರುಜೋಡಣೆಗೆ ಭಾರತೀಯರ ಸಲುವಾಗಿ ಅಭಿನಂದನೆಗಳು.
ಅಂತಾರಾಷ್ಟ್ರೀಯ ರಫ್ತು ನಿಯಂತ್ರಣ ನಿಯಮದಲ್ಲಿ ಭಾರತ ಸದಸ್ಯತ್ವವನ್ನು ಪಡೆಯಲು ಬೆಂಬಲಿಸುತ್ತಿರುವುದಕ್ಕಾಗಿ ಜರ್ಮನ್ಗೆ ಧನ್ಯವಾದ.
ಜರ್ಮನಿಯ ಎಂಜಿನಿಯರಿಂಗ್ ಮತ್ತು ಭಾರತದ ಯಟಿ ಕೌಶಲ್ಯ ಭವಿಷ್ಯದ ಮಾರುಕಟ್ಟೆಯನ್ನು ನಿರ್ಮಿಸಲಿದೆ. ಜರ್ಮನ್ ಸಾಮರ್ಥ್ಯ ಮತ್ತು ಭಾರತದ ಆದ್ಯತೆ ಒಗ್ಗೂಡಿದ್ದು, ಇದು ಪರಸ್ಪರ ಅಭಿಮಾನದ ವಿಷಯ.
ಅಂತ್ಯವಿಲ್ಲದ ಸವಾಲು ಮತ್ತು ಅವಕಾಶಗಳ ಈ ಜಗತ್ತಿನಲ್ಲಿ ಜರ್ಮನ್ ಮತ್ತು ಭಾರತ ಉತ್ತಮ ಪಾಲುದಾರಿಕೆಯನ್ನು ಹೊಂದಬಲ್ಲವು ಎಂದು ಮೋದಿ ಅಭಿಪ್ರಾಯಿಸಿದ್ದಾರೆ.
ಭಾನುವಾರ ರಾತ್ರಿ ಭಾರತಕ್ಕೆ ಬಂದಿಳಿದಿರುವ ಮಾರ್ಕೆಲ್ ಇಂದು ಬೆಳಿಗ್ಗೆ ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿದರು. ನಾಳೆ ಮೋದಿ ಮತ್ತು ಮಾರ್ಕೆಲ್ ಬೆಂಗಳೂರಿಗೆ ಆಗಮಿಸಿ ಉದ್ಯಮಿಗಳ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.