ಅಯೋಧ್ಯೆ: ರಾಮ ನವಮಿಯಂದು ಬುಧವಾರ ಬೆಳಗ್ಗೆ 3.30ಕ್ಕೆ ಮಂಗಳ ಆರತಿಯಿಂದ ಆರಂಭಗೊಂಡು ರಾತ್ರಿ 11ರವರೆಗೆ 19 ಗಂಟೆಗಳ ಕಾಲ ಅಯೋಧ್ಯೆಯ ರಾಮಮಂದಿರ ತೆರೆದಿರುತ್ತದೆ ಮತ್ತು ಭಗವಂತನಿಗೆ ನಾಲ್ಕು ‘ಭೋಗ್’ ನೈವೇದ್ಯಗಳ ಸಮಯದಲ್ಲಿ ದೇವಾಲಯದ ಪರದೆಗಳನ್ನು ತಲಾ ಐದು ನಿಮಿಷಗಳ ಕಾಲ ಎಳೆಯಲಾಗುತ್ತದೆ.
ರಾಮನವಮಿಯ ಸಂದರ್ಭದಲ್ಲಿ 19 ಗಂಟೆಗಳ ಕಾಲ ದೇಗುಲ ತೆರೆದಿರುತ್ತದೆ. ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣದ ಬಳಿಕ ನಡೆಯುತ್ತಿರುವ ಮೊದಲ ರಾಮ ನವಮಿ ಇದಾಗಿರುವುದರಿಂದ ರಾಮನವಮಿಯಂದು ಭಾರೀ ಭಕ್ತಾದಿಗಳು ಸೇರುವ ನಿರೀಕ್ಷೆ ಇದೆ.
ಗಣ್ಯ ಅತಿಥಿಗಳು ಏಪ್ರಿಲ್ 19 ರ ನಂತರವೇ ರಾಮಲಲ್ಲಾನ ದರ್ಶನಕ್ಕಾಗಿ ಅಯೋಧ್ಯೆಗೆ ಭೇಟಿ ನೀಡುವಂತೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮನವಿ ಮಾಡಿದೆ.
ಏಪ್ರಿಲ್ 16 ಮತ್ತು 18 ರ ನಡುವೆ ರಾಮ ಲಲಾನ ದರ್ಶನ ಮತ್ತು ಆರತಿಗಾಗಿ ಎಲ್ಲಾ ವಿಶೇಷ ಪಾಸ್ ಬುಕಿಂಗ್ ಅನ್ನು ಸಹ ರದ್ದುಗೊಳಿಸಿದೆ. ರಾಮ ನವಮಿಯಂದು ರಾಮಮಂದಿರವನ್ನು ಪ್ರವೇಶಿಸಲು ಪ್ರತಿಯೊಬ್ಬರಿಗೂ ಒಂದೇ ಮಾರ್ಗವಿರಲಿದೆ. ಎಲ್ಲಾ ಭಕ್ತರು ಅನುಸರಿಸುವ ಮಾರ್ಗವನ್ನೇ ಗಣ್ಯರು ಕೂಡ ಅನುಸರಿಸಬೇಕಾಗುತ್ತದೆ ಎಂದು ಟ್ರಸ್ಟ್ ಹೇಳಿದೆ.
“ರಾಮ ನವಮಿಯ ದಿನದಂದು, ಬ್ರಹ್ಮ ಮುಹೂರ್ತದ ಸಮಯದಲ್ಲಿ 3:30 ಕ್ಕೆ ಪ್ರಾರಂಭವಾಗಿ, ಭಕ್ತರು ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲಲು ವ್ಯವಸ್ಥೆ ಇರುತ್ತದೆ. ಭಕ್ತರು ರಾತ್ರಿ 11 ರವರೆಗೆ ರಾಮ ಲಲಾನ ದರ್ಶನವನ್ನು ಹೊಂದಲು ಸಾಧ್ಯವಾಗುತ್ತದೆ” ಎಂದು ಅದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.