ಜಮ್ಮು: ಹಿಂದೂಗಳ ಪವಿತ್ರ ವಾರ್ಷಿಕ ಅಮರನಾಥ ಯಾತ್ರೆಯ ನೋಂದಣಿ ಕಾರ್ಯ ಇಂದಿನಿಂದ ಆರಂಭಗೊಂಡಿದ್ದು, ಪರವಾನಗಿ ಪಡೆಯಲು ಹೆಚ್ಚಿನ ಸಂಖ್ಯೆಯ ಬ್ಯಾಂಕ್ ಶಾಖೆಗಳಿಗೆ ತೆರಳಿ ನೋಂದಣಿ ನಡೆಸುತ್ತಿದ್ದಾರೆ. ದಕ್ಷಿಣ ಕಾಶ್ಮೀರದಲ್ಲಿರುವ 3,880 ಮೀಟರ್ ಎತ್ತರದ ಗುಹಾ ದೇಗುಲಕ್ಕೆ 52 ದಿನಗಳ ಯಾತ್ರೆಯು ಜೂನ್ 29 ರಂದು ಪ್ರಾರಂಭವಾಗಿ ಆಗಸ್ಟ್ 19 ರಂದು ಮುಕ್ತಾಯಗೊಳ್ಳಲಿದೆ ಎಂದು ಶ್ರೀ ಅಮರನಾಥ ದೇಗುಲ ಮಂಡಳಿ (SASB) ಪ್ರಕಟಣೆಯಲ್ಲಿ ತಿಳಿಸಿದೆ.
ದಕ್ಷಿಣ ಕಾಶ್ಮೀರದ ಅನಂತನಾಗ್ನ ಪಹಲ್ಗಾಮ್ ಮೂಲಕ ಸಾಂಪ್ರದಾಯಿಕ 48-ಕಿಮೀ ಮಾರ್ಗದ ಮೂಲಕ ಅಮರನಾಥ ಯಾತ್ರೆಗೆ ತೆರಳಬಹುದು. ಮಾತ್ರವಲ್ಲದೇ ಮಧ್ಯ ಕಾಶ್ಮೀರದ ಗಂಡರ್ಬಾಲ್ ಜಿಲ್ಲೆಯ 14-ಕಿಮೀ ಕಡಿಮೆ ಆದರೆ ಕಡಿದಾದ ಬಾಲ್ಟಾಲ್ ಮಾರ್ಗ ಮೂಲಕ ಯಾತ್ರೆ ನಡೆಸಬಹುದು.
“ಮುಂಗಡ ನೋಂದಣಿ ಗೊತ್ತುಪಡಿಸಿದ ಬ್ಯಾಂಕ್ ಶಾಖೆಗಳಲ್ಲಿ ಆರಂಭವಾಗಿದೆ. ದೇಶಾದ್ಯಂತ PNB (ಪಂಜಾಬ್ ನ್ಯಾಷನಲ್ ಬ್ಯಾಂಕ್)ಯ 540 ಶಾಖೆಗಳಲ್ಲಿ ನೋಂದಣಿ ನಡೆಸಲಾಗುತ್ತಿದೆ” ಎಂದು ನೋಂದಣಿ ಪ್ರಕ್ರಿಯೆಯಲ್ಲಿ ತೊಡಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದು 2022 ರಲ್ಲಿ ಅನುಸರಿಸಿದ ಹಸ್ತಚಾಲಿತ ಕಾರ್ಯವಿಧಾನಕ್ಕಿಂತ ಹೆಚ್ಚಾಗಿ ಯಾತ್ರಿಗಳಿಗೆ ಆಧಾರ್ ದೃಢೀಕರಣ ಆಧಾರಿತ ಫಾರ್ಮ್ ಜನರೇಷನ್ ಮಾಡಲಾಗಿದೆ. ಈಗ ಫಾರ್ಮ್ಗಳನ್ನು ಸಿಸ್ಟಂ- ಜನರೇಟ್ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಗುಹಾ ದೇಗುಲಕ್ಕೆ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳ ಮೊದಲ ಬ್ಯಾಚ್ನ ಭಾಗವಾಗಲು ನಾವು ಬಯಸುತ್ತೇವೆ. ನಾವು ನೋಂದಾಯಿಸಿದ್ದೇವೆ. ಇದು ನಮಗೆ ಸಂತೋಷದ ಕ್ಷಣವಾಗಿದೆ” ಎಂದು ಜಾನಿಪುರದ ಸುಮನ್ ದೇವಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.