ನವದೆಹಲಿ: ಇನ್ನು ಕೆಲವೇ ವರ್ಷಗಳಲ್ಲಿ ಕಾಂಗ್ರೆಸ್ ಡೈನೋಸಾರ್ನಂತೆ ಅಳಿದು ಹೋಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಕಾಂಗ್ರೆಸ್ನೊಳಗಿನ ಆಂತರಿಕ ಕಲಹವನ್ನು ರಿಯಾಲಿಟಿ ಶೋ “ಬಿಗ್ ಬಾಸ್” ಮನೆಗೆ ಹೋಲಿಸಿದ ಅವರು, ಪಕ್ಷದ ನಾಯಕರು ಪ್ರತಿನಿತ್ಯ ಪರಸ್ಪರ ಬಟ್ಟೆ ಹರಿದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
”ಕಾಂಗ್ರೆಸ್ ನಿಂದ ನಾಯಕರ ವಲಸೆ ಮುಂದುವರೆದಿದೆ. ಒಬ್ಬರ ಹಿಂದೆ ಒಬ್ಬರಂತೆ ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದಾರೆ. ಇನ್ನು ಕೆಲವೇ ವರ್ಷಗಳಲ್ಲಿ ಡೈನೋಸಾರ್ ನಂತೆ ಕಾಂಗ್ರೆಸ್ ನಶಿಸಲಿದೆ ಎಂಬ ಭಯವಿದೆ. 2024ರ ನಂತರ ಕೆಲವೇ ವರ್ಷಗಳಲ್ಲಿ ನಾವು ಕಾಂಗ್ರೆಸ್ ಹೆಸರನ್ನು ತೆಗೆದುಕೊಂಡರೆ, ಮಕ್ಕಳು ಯಾರು ಎಂದು ಕೇಳುತ್ತಾರೆ? ಎಂದಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪೌರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಅನಿಲ್ ಬಲುನಿ ಅವರನ್ನು ಬೆಂಬಲಿಸಿ ಉತ್ತರಾಖಂಡದ ಗೌಚಾರ್ನಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ಸಿಂಗ್ ಮಾತನಾಡಿದರು.
ಎಎಪಿ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, “ಅರವಿಂದ್ ಕೇಜ್ರಿವಾಲ್ ನಮ್ಮಿಂದಾಗಿ ಜೈಲಿಗೆ ಹೋದರು ಎಂದು ಭಾವಿಸಿದರೂ, ಅವರಿಗೆ ಏಕೆ ರಿಲೀಫ್ ಸಿಗುತ್ತಿಲ್ಲ? ನಾವು ನ್ಯಾಯಾಲಯಗಳ ನಿಯಂತ್ರಣವನ್ನು ಕೂಡ ತೆಗೆದುಕೊಂಡಿದ್ದೇವೆಯೇ? ಈ ಜನರು ಏನು ಹೇಳಲು ಪ್ರಯತ್ನಿಸುತ್ತಿದ್ದಾರೆ?” ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.