ಹೈದರಾಬಾದ್: ತನ್ನ ಪ್ರದೇಶಕ್ಕೆ ಆಗಮಿಸಿದ ನಾಯಕನನ್ನು ಸ್ವಾಗತಿಸುವುದಕ್ಕಾಗಿ ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಎರಡು ಪಾರಿವಾಳಕ್ಕೆ ಪಟಾಕಿಗಳನ್ನು ಕಟ್ಟಿ ಮೇಲಕ್ಕೆ ಹಾರಿಸಿದ ಘಟನೆ ಗೋದಾವರಿಯಲ್ಲಿ ನಡೆದಿದೆ.
ಕೊವುರು ಗ್ರಾಮಕ್ಕೆ ಆಗಮಿಸಿದ ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್. ರಘವೀರ ರೆಡ್ಡಿ ಅವರನ್ನು ಸ್ವಾಗತಿಸುವುದಕ್ಕಾಗಿ ಈ ರೀತಿ ಪಾರಿವಾಳವನ್ನು ಹಿಂಸಿಸಲಾಗಿದೆ.
ಎರಡು ಪಾರಿವಾಳಗಳನ್ನು ಕಟ್ಟಿ ಅದಕ್ಕೆ ರಾಕೆಟ್(ಪಟಾಕಿ)ಯನ್ನು ಜೋಡಿಸಿ ಬೆಂಕಿ ಹಚ್ಚಿ ಮೇಲಕ್ಕೆ ಹಾರಿಸಲಾಗಿದೆ. ಮೇಲಕ್ಕೆ ಹಾರುವಾಗ ಹಕ್ಕಿಗಳು ಪಟಾಕಿಯಿಂದ ಬೇರ್ಪಡುತ್ತದೆ ಎಂಬ ಭ್ರಮೆಯಿಂದ ಈ ರೀತಿ ಮಾಡಲಾಗಿದೆ, ಆದರೆ ಬೆಂಕಿ ಹಕ್ಕಿಗಳಿಗೆ ತಗುಲಿ ಅವು ಸಾವನ್ನಪ್ಪಿವೆ.
ಈ ಘಟನೆ ಪ್ರಾಣಿ ಪ್ರಿಯರನ್ನು ಕೆರಳಿಸಿದ್ದು, ಅಪರಾಧಿಗಳ ವಿರುದ್ಧ ಸೆಕ್ಷನ್ 11, ಪ್ರಾಣಿಗಳ ವಿರುದ್ಧದ ಕ್ರೂರತ್ವ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.