ನವದೆಹಲಿ: ನಾವೆಲ್ಲಾ ನಮ್ಮ ನಮ್ಮ ಜೀವನದಲ್ಲಿ ಬ್ಯೂಸಿಯಾಗಿರುತ್ತೇವೆ, ಸಾವಿರಾರು ರೂಪಾಯಿ ಖರ್ಚು ಮಾಡಿ ತಿಂಡಿ, ತಿನಿಸುಗಳನ್ನು ಸೇವಿಸುತ್ತೇವೆ. ತಿಂದು ಉಳಿದ ಆಹಾರವನ್ನು ಕೊಚ್ಚೆ ಗುಂಡಿಗೆ ಹಾಕುತ್ತೇವೆಯೇ. ಸೇವಿಸಿ ಮಿಕ್ಕಿದ ಆಹಾರವನ್ನು ಹಸಿದವರಿಗೆ ನೀಡುವ ಅಥವಾ ಪ್ರಾಣಿ, ಪಕ್ಷಗಳಿಗೆ ಹಾಕುವ ಎಂಬ ಕನಿಷ್ಠ ಕಾಳಜಿಯೂ ನಮಗಿರುವುದಿಲ್ಲ.
ಆದರೆ ಇಂತವರ ನಡುವೆ ಅಪರೂಪ ಎಂಬಂತೆ ಬೀದಿ ಬದಿಯ ಮಕ್ಕಳನ್ನು ಪ್ರತಿಷ್ಠಿತ ಹೋಟೆಲ್ಗೆ ಕರೆದುಕೊಂಡು ಹೋಗಿ ಬೇಕಾದ ಆಹಾರ ತೆಗೆದುಕೊಡುವವರು ಇದ್ದಾರೆ ಎಂದರೆ ನಂಬುತ್ತೀರಿ? ನಂಬಲೇ ಬೇಕು. ಡಾ.ಪಿಸಿ ಅಲೆಕ್ಸಾಂಡ್ ಇಂತಹ ಬೆರಳೆಣಿಕೆಯ ಜನರಲ್ಲಿ ಒಬ್ಬರು.
ಗೌರವಾನ್ವಿತ ವ್ಯಕ್ತಿಯಾಗಿರುವ ಇವರು ದೆಹಲಿಯ ಜನ್ಪಥ್ನಲ್ಲಿನ ಸರಯನ ಭವನ್ಗೆ ನಾಲ್ಕೈದು ಬೀದಿ ಬದಿ ಮಕ್ಕಳನ್ನು ಕರೆದುಕೊಂಡು ಹೋಗಿ ಅವರಿಗೆ ಭೂರಿ ಭೋಜನವನ್ನು ತೆಗೆದುಕೊಡುತ್ತಾರೆ.
ಹಸಿದವರು ಕೈ ಚಾಚಿ ಬೇಡಿದರೂ ಅವರನ್ನು ದೂಡಿ ಮುಂದೆ ಹೋಗುವ ಜನರಿರುವ ಈ ಕಾಲದಲ್ಲಿ ಅಲೆಕ್ಸಾಂಡರ್ರಂತವರು ಸಿಗುವುದು ಬಲು ಅಪರೂಪ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.