ನವದೆಹಲಿ: 2030ರ ವೇಳೆಗೆ ಭಾರತ ಇಂಗಾಲದ ಹೊರಸೂಸುವಿಕೆಯ ಪ್ರಮಾಣವನ್ನು ಶೇ.33-35ರಷ್ಟು ಕಡಿತಗೊಳಿಸಲಿದೆ, ಅಲ್ಲದೇ ತನ್ನ ಆರ್ಥಿಕತೆಯನ್ನು ಹೆಚ್ಚು ಶಕ್ತಿ ದಕ್ಷತೆಯನ್ನಾಗಿಸಲು ನಿರ್ಧರಿಸಿದೆ.
ಡಿಸೆಂಬರ್ನಲ್ಲಿ ಪ್ಯಾರಿಸ್ನಲ್ಲಿ ನಡೆಯಲಿರುವ ಬಹುಮುಖ್ಯ ವಿಶ್ವಸಂಸ್ಥೆ ಸಮಿತ್ನ ಅಂಗವಾಗಿ ಭಾರತ ಶುಕ್ರವಾರ ತನ್ನ ಹವಮಾನ ವೈಪರೀತ್ಯ ನಿಯಮಗಳನ್ನು ಘೋಷಿಸಿದೆ.
ಹವಮಾನ ವೈಪರೀತ್ಯವನ್ನು ತಡೆಯಲು ಸರ್ಕಾರದ ಕ್ರಿಯಾ ಯೋಜನೆಗಳನ್ನು ಉಲ್ಲೇಖಿಸುವ ರಾಷ್ಟ್ರೀಯ ಉದ್ದೇಶಿತ ಕೊಡುಗೆಗಳನ್ನು ಅನಾವರಣಗೊಳಿಸಿ ಮಾತನಾಡಿದ ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರು, ‘ಜಿಡಿಪಿಯ ಹೊರಸೂಸುವಿಕೆಯ ತೀವ್ರತೆಯನ್ನು 2005ರ ಮಟ್ಟದಿಂದ ಶೇ.33-55ರಷ್ಟು ಕಡಿಮೆಗೊಳಿಸುವುದು ನಮ್ಮ ಗುರಿ’ ಎಂದರು.
38 ಪುಟಗಳನ್ನು ಒಳಗೊಂಡ ದಾಖಲೆಗಳನ್ನು ಗುರುವಾರ ಭಾರತ ಹವಮಾನ ವೈಪರೀತ್ಯದ ಮೇಲಿನ ಯುನ್ ಫ್ರೇಮ್ವರ್ಕ್ ಕನ್ವೆನ್ಷನ್ಗೆ ಸಲ್ಲಿಕೆ ಮಾಡಿದೆ. ವಿಶ್ವದ ಮೂರನೇ ಅತಿದೊಡ್ಡ ಹಸಿರುಮನೆ ಇಂಗಾಲದ ಹೊರಸೂವಿಕೆ ರಾಷ್ಟ್ರವಾಗಿರುವ ಭಾರತ, 2030ರ ವೇಳೆಗೆ ಶೇ.40ರಷ್ಟು ಮೊತ್ತದ ವಿದ್ಯುತ್ ಸಾಮರ್ಥ್ಯವನ್ನು ಪಳೆಯುಳಿಕೆಯಲ್ಲದ ಇಂಧನ ಮೂಲಗಳಿಂದ ಪಡೆಯಲು ಟಾರ್ಗೆಟ್ ರೂಪಿಸಿರುವುದಾಗಿ ತಿಳಿಸಿದೆ.
ಅಲ್ಲದೇ ಇಂಗಾಲದ ಹೊರಸೂಸುವಿಕೆಯನ್ನು ಸಂಪೂರ್ಣವಾಗಿ ತಡಗಟ್ಟಲು ಸಾಧ್ಯವಿಲ್ಲ ಎಂದೂ ಅದು ಸ್ಪಷ್ಟಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.