ನವದೆಹಲಿ: ಕ್ರಿಮಿನಲ್ಗಳು ಧನಸಹಾಯಕ್ಕಾಗಿ ಇತ್ತೀಚಿನ ತಂತ್ರಜ್ಞಾನವನ್ನು ಬಳಸುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ, ಹೀಗಾಗಿ ತನಿಖೆ ಮತ್ತು ನ್ಯಾಯ ವಿತರಣೆಗಾಗಿ ದೇಶ ದೇಶಗಳ ನಡುವೆ ಸಹಕಾರವನ್ನು ವಿಸ್ತರಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಪರಸ್ಪರರ ನ್ಯಾಯವ್ಯಾಪ್ತಿಯನ್ನು ಗೌರವಿಸಿದಾಗಲೂ ಸಹ ಸಹಕಾರವು ಸಂಭವಿಸಬಹುದು ಮತ್ತು ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಿದಾಗ, ನ್ಯಾಯವ್ಯಾಪ್ತಿಯು ನ್ಯಾಯವನ್ನು ನೀಡಲು ಒಂದು ಸಾಧನ ದೊರೆಕಿದಂತಾಗುತ್ತದೆ, ನ್ಯಾಯ ವಿತರಣೆಯಲ್ಲಿ ವಿಳಂಬ ಆಗುವುದಿಲ್ಲ ಎಂದು ಪ್ರತಿಪಾದಿಸಿದರು.
ಕಾಮನ್ವೆಲ್ತ್ ಲೀಗಲ್ ಎಜುಕೇಶನ್ ಅಸೋಸಿಯೇಷನ್ (CLEA) – ಕಾಮನ್ವೆಲ್ತ್ ಅಟಾರ್ನಿಗಳು ಮತ್ತು ಸಾಲಿಸಿಟರ್ಸ್ ಜನರಲ್ ಕಾನ್ಫರೆನ್ಸ್ (CASGC) ನಲ್ಲಿ ಮಾತನಾಡಿದ ಅವರು, ದೇಶಗಳು ಈಗಾಗಲೇ ವಾಯು ಸಂಚಾರ ನಿಯಂತ್ರಣ ಮತ್ತು ಕಡಲ ಸಂಚಾರದ ಡೊಮೇನ್ನಲ್ಲಿ ಪರಸ್ಪರ ಕೆಲಸ ಮಾಡುತ್ತಿವೆ ಮತ್ತು ತನಿಖೆ ಮತ್ತು ನ್ಯಾಯ ವಿತರಣೆಗೆ ಇದನ್ನು ವಿಸ್ತರಿಸಬೇಕೆಂದು ಪ್ರತಿಪಾದಿಸಿದರು.
ಕ್ರಿಪ್ಟೋಕರೆನ್ಸಿ ಮತ್ತು ಸೈಬರ್ ಬೆದರಿಕೆಗಳ ಹೆಚ್ಚಳವು ಹೊಸ ಸವಾಲುಗಳನ್ನು ಪ್ರಸ್ತುತಪಡಿಸುತ್ತದೆ ಮತ್ತು ನ್ಯಾಯ ವಿತರಣಾ ವ್ಯವಸ್ಥೆಯನ್ನು ಹೆಚ್ಚು ಹೊಂದಿಕೊಳ್ಳುವಂತೆ ಮಾಡುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.