ತಿರುವನಂತಪುರಂ: 2021 ರ ಡಿಸೆಂಬರ್ 19 ರಂದು ನಿಷೇಧಿತ ಇಸ್ಲಾಮಿಕ್ ಉಗ್ರ ಗುಂಪು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಭಯೋತ್ಪಾದಕರಿಂದ ಹತ್ಯೆಗೀಡಾದ ಕೇರಳ ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸನ್ ಅವರಿಗೆ ನ್ಯಾಯ ಒದಗಿಸುವ ತೀರ್ಪನ್ನು ಇಂದು ಕೇರಳ ನ್ಯಾಯಾಲಯ ನೀಡಿದೆ. ತನ್ನ ಐತಿಹಾಸಿಕ ತೀರ್ಪಿನಲ್ಲಿ ಎಲ್ಲಾ 15 ಪಿಎಫ್ಐ ಕೊಲೆಗಾರರಿಗೆ ಮರಣದಂಡನೆಯನ್ನು ವಿಧಿಸಿದೆ.
ನ್ಯಾಯಾಲಯವು ಎಲ್ಲಾ 15 SDPI (ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ಮತ್ತು PFI (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಕಾರ್ಯಕರ್ತರಿಗೆ ದಂಡ ಮತ್ತು ಕಠಿಣ ಶಿಕ್ಷೆಯನ್ನು ವಿಧಿಸಿದೆ. ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ-1 ನ್ಯಾಯಾಧೀಶೆ ಶ್ರೀದೇವಿ ವಿ ಅವರು ಈ ತೀರ್ಪು ನೀಡಿದ್ದಾರೆ.
ನೈಸಾಮ್, ಅಜ್ಮಲ್, ಅನೂಪ್, ಮೊಹಮ್ಮದ್ ಅಸ್ಲಾಂ, ಅಬ್ದುಲ್ ಕಲಾಂ ಅಲಿಯಾಸ್ ಸಲಾಂ, ಸಫರುದ್ದೀನ್, ಮನ್ಶಾದ್, ಜಸೀಬ್ ರಾಜಾ, ನವಾಸ್, ಸಮೀರ್, ನಜೀರ್, ಅಬ್ದುಲ್ ಕಲಾಂ, ಜಾಕೀರ್ ಹುಸೇನ್, ಶಾಜಿ ಮತ್ತು ಶೆರ್ನಾಸ್ ಅಶ್ರಫ್ ಶಿಕ್ಷೆಗೊಳಗಾದ 15 ಮಂದಿ. ರಂಜಿತ್ ಅವರ ಹತ್ಯೆಗೆ ಶಿಕ್ಷೆಗೊಳಗಾದ 15 ಮಂದಿಯ ಪೈಕಿ ಎಂಟು ಮಂದಿ ನೇರವಾಗಿ ಹತ್ಯೆಯ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ.
ಪ್ರಾಸಿಕ್ಯೂಷನ್ ಅಪರಾಧಿಗಳಿಗೆ ಗರಿಷ್ಠ ಶಿಕ್ಷೆಯನ್ನು ಕೋರಿತ್ತು. ಆರೋಪಿಗಳು ತರಬೇತು ಪಡೆದ ಕೊಲೆಗಾರರಾಗಿದ್ದು, ರಂಜಿತ್ ಅವರನ್ನು ಅವರ ಮಗು, ಪತ್ನಿ ಮತ್ತು ತಾಯಿಯ ಸಮ್ಮುಖದಲ್ಲಿ ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಇದು ಅಪರಾಧವನ್ನು ಪೈಶಾಚಿಕ ಕೃತ್ಯದ ಅಪರೂಪದ ಅಪರಾಧದ ವ್ಯಾಪ್ತಿಗೆ ತಂದಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಡಿಸೆಂಬರ್ 19, 2021 ರಂದು, ಇಸ್ಲಾಮಿಕ್ ಮೂಲಭೂತವಾದಿಗಳ ಗುಂಪು ಭಾನುವಾರ ನಸುಕಿನಲ್ಲಿ ಅವರ ಮನೆಗೆ ನುಗ್ಗಿ ರಂಜಿತ್ ಅವರನ್ನು ಕೊಂದಿತು. ಪಾಲಕ್ಕಾಡ್ ಜಿಲ್ಲೆಯ ಎಲ್ಲಪುಲ್ಲಿಯಲ್ಲಿ ಬೆಳಗ್ಗೆ 9:30ಕ್ಕೆ ಈ ಘಟನೆ ನಡೆದಿತ್ತು.
BJP leader Ranjith Sreenivas hacked to death by PFI backed j*hadis in God’s own country! Om Shanti! 🙏 3rd political murder in last month in Kerala! But hey— THIS is NORMAL for KERALA! It has bn so since decades now. Political murders—- BRUTAL murders— are no biggie in Kerala. 😞 https://t.co/fx1jJsrwQH pic.twitter.com/rL0XyYPOai
— Levina🇮🇳 (@LevinaNeythiri) December 19, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.