ನವದೆಹಲಿ: ಕಾಶ್ಮೀರದ ಜನತೆಯ ಮೇಲೆ ಭಾರತ ದಬ್ಬಾಳಿಕೆ ಮಾಡುತ್ತಿದೆ ಎಂದು ವಿಶ್ವಸಂಸ್ಥೆಯ ವೇದಿಕೆಯ ಮೇಲೆ ನಿಂತು ಪಾಕಿಸ್ಥಾನ ಪ್ರಧಾನಿ ಬೊಬ್ಬಿಡುತ್ತಾರೆ. ಆದರೆ ತನ್ನ ದೇಶ ಆಕ್ರಮಿಸಿಕೊಂಡಿರುವ ಕಾಶ್ಮೀರದಲ್ಲಿ ಏನು ನಡೆಯುತ್ತಿದೆ ಎಂಬುದರ ಪರಿಜ್ಞಾನ ಕೂಡ ಅವರಿಗೆ ಇದ್ದಂತಿಲ್ಲ.
ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಜನತೆಗೆ ಪಾಕಿಸ್ಥಾನದಿಂದ ನಮಗೆ ಬಿಡುಗಡೆ ಬೇಕು ಎಂದು ಆಗ್ರಹಿಸಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ವತಂತ್ರ ಕಾಶ್ಮೀರ ಎಂದೂ ಪಾಕ್ನ ಭಾಗವಾಗಲಾರದು ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ. ಆದರ ಆ ದೇಶದ ಪ್ರಧಾನಿ ಭಾರತದ ಕಾಶ್ಮೀರದ ಬಗ್ಗೆ ಮಾತ್ರ ಚಿಂತೆಯೇ ಹೊರತು ಇವರ ಬಗ್ಗೆಯಲ್ಲ.
ಪಾಕ್ ಆಕ್ರಮಿತ ಕಾಶ್ಮೀರ ಅಭಿವೃದ್ಧಿಯನ್ನೇ ಕಂಡಿಲ್ಲ, ಅಲ್ಲಿನ ಜನತೆಗೆ ಉದ್ಯೋಗವಿಲ್ಲ. ಅವರ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲಾಗಿದೆ, ಮಾನವ ಹಕ್ಕು ಉಲ್ಲಂಘಿಸಲಾಗುತ್ತಿದೆ. ಇದು ಅಲ್ಲಿನ ಜನತೆಯನ್ನು ಕಂಗೆಡಿಸಿದ್ದು ಪಾಕ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಅಲ್ಲಿನ ಸೇನೆ ಮತ್ತು ಸರ್ಕಾರ ಇವರನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಲೇ ಇದೆ. ಆದರೆ ಜನ ಈಗ ಭಾರೀ ಸಂಖ್ಯೆಯಲ್ಲಿ ಹೊರ ಬಂದು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ತಮ್ಮ ವಿರುದ್ಧ ಸೇನೆಯನ್ನು ಬಿಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಲ್ಲದೇ ಪಾಕಿಸ್ಥಾನಕ್ಕಿಂತ ಭಾರತ ಉತ್ತಮ ದೇಶ ಎಂಬ ಅಭಿಪ್ರಾಯಗಳನ್ನೂ ಇವರು ವ್ಯಕ್ತಪಡಿಸುತ್ತಿದ್ದಾರೆ. ಅವರ ಪ್ರತಿಭಟನೆಯ ವಿಡಿಯೋಗಳು, ಸೇನೆಯ ದೌರ್ಜನ್ಯಗಳ ವಿಡಿಯೋಗಳು ಜಗಜ್ಜಾಹೀರಾಗಿದ್ದು ಪಾಕ್ ನಿಜ ಬಣ್ಣವನ್ನು ಬಯಲು ಮಾಡಿದೆ.
ಇಷ್ಟೆಲ್ಲಾ ನಡೆದರು ನವಾಝ್ ಶರೀಫ್ ಮಾತ್ರ ಭಾರತ ಕಾಶ್ಮೀರದ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂದು ಅರಚಾಡುತ್ತಿದ್ದಾರೆ. ಮೊದಲು ಅವರು ತಾನು ಆಕ್ರಮಿಸಿಕೊಂಡಿರುವ ಕಾಶ್ಮೀರದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.