ನವದೆಹಲಿ: ಕೇಂದ್ರ ಸರ್ಕಾರವು ಗುರುವಾರ 2024 ರ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಈ ಪಟ್ಟಿಯು ಐದು ಪದ್ಮವಿಭೂಷಣ, 17 ಪದ್ಮಭೂಷಣ ಮತ್ತು 110 ಪದ್ಮಶ್ರೀ ಪ್ರಶಸ್ತಿಗಳನ್ನು ಒಳಗೊಂಡಿದೆ. ಪ್ರಶಸ್ತಿ ಪುರಸ್ಕೃತರಲ್ಲಿ 30 ಮಂದಿ ಮಹಿಳೆಯರು ಮತ್ತು ವಿದೇಶಿಗರು/ಎನ್ಆರ್ಐ/ಪಿಐಒ/ಒಸಿಐ ವರ್ಗದಿಂದ ಎಂಟು ವ್ಯಕ್ತಿಗಳು ಸೇರಿದ್ದಾರೆ. ಒಂಬತ್ತು ಮರಣೋತ್ತರ ಪ್ರಶಸ್ತಿ ಸೇರಿದೆ.
ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ನಟ ಕೆ ಚಿರಂಜೀವಿ, ನಟಿ ವೈಜಯಂತಿಮಾಲಾ ಬಾಲಿ, ಭರತ ನಾಟ್ಯ ಕಲಾವಿದೆ ಪದ್ಮಾ ಸುಬ್ರಹ್ಮಣ್ಯಂ ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಾಮಾಜಿಕ ಕಾರ್ಯಕರ್ತ ಬಿಂದೇಶ್ವರ್ ಪಾಠಕ್ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.
ಸುಪ್ರೀಂಕೋರ್ಟ್ನ ಮೊದಲ ಮಹಿಳಾ ನ್ಯಾಯಮೂರ್ತಿ ಎಂ ಫಾತಿಮಾ ಬೀವಿ ಮತ್ತು ತಮಿಳು ನಟ ವಿಜಯಕಾಂತ್ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ಬಾಲಿವುಡ್ ನಟ ಮಿಥುನ್ ಚಕ್ರವರ್ತಿ, ಗಾಯಕಿ ಉಷಾ ಉತ್ತಪ್ಪ, ಕೈಗಾರಿಕೋದ್ಯಮಿ ಸೀತಾರಾಮ್ ಜಿಂದಾಲ್, ಸಂಯೋಜಕ ಪ್ಯಾರೆಲಾಲ್ ಶರ್ಮಾ ಮತ್ತು ಫಾಕ್ಸ್ಕಾನ್ ಅಧ್ಯಕ್ಷ ಯಂಗ್ ಲಿಯು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪದ್ಮ ಪ್ರಶಸ್ತಿ ಪುರಸ್ಕೃತ 34 ಮಂದಿ ತೆರೆಮರೆಯ ಸಾಧಕರು. ಅವರಲ್ಲಿ ಭಾರತದ ಮೊದಲ ಮಹಿಳಾ ಆನೆ ಮಾವುತ ಪರ್ಬತಿ ಬರುವಾ, ಬುಡಕಟ್ಟು ಪರಿಸರವಾದಿ ಚಾಮಿ ಮುರ್ಮು ಮತ್ತು ಸಮಾಜ ಸೇವಕ ಸಂಗತಾಂಕಿಮಾ ಸೇರಿದ್ದಾರೆ. 10 ಮಂದಿ ಕನ್ನಡಿಗರಿಗೆ ಪ್ರಶಸ್ತಿ ದೊರೆತಿದೆ.
ಕರ್ನಾಟಕದ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಸೋಮಣ್ಣ – ಮೈಸೂರಿನ ಗಿರಿಜನ ಕಲ್ಯಾಣ ಕಾರ್ಯಕರ್ತ
ಪ್ರೇಮಾ ಧನರಾಜ್ – ಪ್ಲಾಸ್ಟಿಕ್ ಸರ್ಜನ್ ಮತ್ತು ಸಾಮಾಜಿಕ ಕಾರ್ಯಕರ್ತೆ
ರೋಹನ್ ಬೋಪಣ್ಣ-ಕ್ರೀಡೆ
ಅನುಪಮಾ ಹೊಸಕೆರೆ-ಕಲೆ
ಶ್ರೀಧರ್ ಮಾಕಂ ಕೃಷ್ಣಮೂರ್ತಿ-ಸಾಹಿತ್ಯ & ಶಿಕ್ಷಣ
ಕೆಎಸ್ ರಾಜಣ್ಣ-ಸೋಶಿಯಲ್ ವರ್ಕ್
ಚಂದ್ರಶೇಖರ್ ಚನ್ನಪಟ್ಟಣ ರಾಜಣ್ಣಾಚಾರ್-ಮೆಡಿಸಿನ್
ಶಶಿ ಸೋನಿ-ಟ್ರೇಡ್ & ಇಂಡಸ್ಟ್ರಿ
ಪದ್ಮಭೂಷಣ ಪ್ರಶಸ್ತಿ ಪಡೆದವರು
ಸೀತಾರಾಮ್ ಜಿಂದಾಲ್-ಟ್ರೇಡ್& ಇಂಡಸ್ಟ್ರಿ-ಕರ್ನಾಟಕ
ಪದ್ಮಭೂಷಣ ಪ್ರಶಸ್ತಿ ಪಡೆದವರು
ಸೀತಾರಾಮ್ ಜಿಂದಾಲ್-ಟ್ರೇಡ್ & ಇಂಡಸ್ಟ್ರಿ-ಕರ್ನಾಟಕ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.